ತ್ರಿಶೂರ್ ಶಾಲೆಯಲ್ಲಿ ಗುಂಡು ಹಾರಾಟ-ಅಧ್ಯಾಪಕರ ಕೊಠಡಿಗೆ ನುಗ್ಗಿ ಬೆದರಿಕೆ-ಕೃತ್ಯ ಎಸಗಿದ ಹಳೆ ವಿದ್ಯಾರ್ಥಿ ಪೊಲೀಸ್‌ ವಶಕ್ಕೆ

ಮಂಗಳೂರು(ತ್ರಿಶೂರ್):ತ್ರಿಶೂರಿನ ವಿವೇಕಾನಂದ ಶಾಲೆಯ ತರಗತಿಗೆ ಬಂದ ಹಳೆ ವಿದ್ಯಾರ್ಥಿ ಜಗನ್ ಗುಂಡು ಹಾರಿಸಿದ ಘಟನೆ ನಡೆದಿದೆ.

ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಧ್ಯಾಪಕರೊಂದಿಗಿನ ವೈಷಮ್ಯವೇ ಇದಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ನಗರದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆ ಇದಾಗಿದ್ದು, ಜಗನ್ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬನ ಹೆಸರನ್ನು ಕೇಳಿಕೊಂಡು ಬಂದಿದ್ದಾನೆ. ಅವನು ಸಿಗದೇ ಇದ್ದಾಗ ಸ್ಟಾಪ್‍ರೂಮ್‍ಗೆ ನುಗ್ಗಿ ಬೆದರಿಕೆ ಹಾಕಿದ್ದಾನೆ. ತರಗತಿ ಕೋಣೆಗೆ ಪ್ರವೇಶಿಸಿ ಮೇಲ್ಭಾಗಕ್ಕೆ ಮೂರು ಬಾರಿ ಗುಂಡು ಹಾರಿಸಿದ್ದಾನೆ. ಇಷ್ಟೆಲ್ಲಾ ಮಾಡಿ ಪಾರಾಗಲೂ ಪ್ರಯತ್ನಿಸಿದ ಯುವಕನನ್ನು ಊರವರು ಮತ್ತು ಅಧ್ಯಾಪಕರು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಯುವಕ ಸ್ಟಾಪ್ ರೂಮಿಗೆ ಬರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

LEAVE A REPLY

Please enter your comment!
Please enter your name here