ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಹುಟ್ಟಡಗಿಸಿದ್ದ ಕರಾವಳಿಯ ಯೋಧ-ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ವೀರ ಮರಣ

ಮಂಗಳೂರು(ದೆಹಲಿ): ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಸೇನಾ ಕಾರ್ಯಾಚರಣೆಯ ವೇಳೆ ಕರಾವಳಿ ಕನ್ನಡಿಗ, ವೀರಯೋಧ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಹುತಾತ್ಮರಾಗಿದ್ದಾರೆ.

ಎಮ್ ವಿ ಪ್ರಾಂಜಲ್ ಮೂಲತಃ ದಕ್ಷಿಣ ಕನ್ನಡದ ಸುರತ್ಕಲ್‌ ನವರಾಗಿದ್ದು, ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಯ ಸದ್ದಡಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಶ್ಮೀರ ಕಣಿವೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ಭಯೋತ್ಪಾದಕ ಚಟುವಟಿಕೆ ಬಗ್ಗು ಬಡಿಯುವಲ್ಲಿ ಪ್ರಾಂಜಲ್ ಅವರ ಕೊಡುಗೆಯನ್ನು ಸೇನೆ ಕೊಂಡಾಡಿದೆ. ವೀರ ಯೋಧನ ತ್ಯಾಗ ಬಲಿದಾನಕ್ಕೆ ದೇಶ ಕಂಬನಿ ಮಿಡಿದಿದೆ.

LEAVE A REPLY

Please enter your comment!
Please enter your name here