ಶಬರಿಮಲೆಗೆ ತೆರಳುವವರಿಗೆ ಶುಭ ಸುದ್ದಿ-ಡಿ.1ರಿಂದ ಶಬರಿಮಲೆಗೆ ʼಕೆ ಎಸ್ ಆರ್ ಟಿಸಿ ವೋಲ್ವೋ ಬಸ್’ ಸಂಚಾರ ಆರಂಭ

ಮಂಗಳೂರು(ಬೆಂಗಳೂರು): ಶಬರಿಮಲೆಗೆ ತೆರಳುವ ಅಯ್ಯಪ್ಪನ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆ ಎಸ್ ಆರ್ ಟಿಸಿ ಶಬರಿಮಲೆಗೆ ಡಿ.1ರಿಂದ ವೋಲ್ವೋ ಬಸ್ ಸಂಚಾರ ಆರಂಭಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ನೀಡಿದ್ದು, ಬೆಂಗಳೂರು-ನೀಲಕ್ಕಲ್ ಮಾರ್ಗವಾಗಿ ಶಬರಿಮಲೆಗೆ ವೋಲ್ಪೋ ವಾಹನಗಳನ್ನು ಡಿ.1ರಿಂದ ಆರಂಭಿಸುವುದಾಗಿ ಹೇಳಿದೆ. ಡಿ.1, 2023ರಿಂದ ಬೆಂಗಳೂರು-ನೀಲಕ್ಕಲ್ ಮಾರ್ಗವಾಗಿ ವೋಲ್ವೋ ಬಸ್ ಸಂಚಾರ ಆರಂಭಿಸಲಾಗುತ್ತಿದೆ. ಈ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ 1.50ಕ್ಕೆ ಹೊರಡಲಿದೆ. ನೀಲಕ್ಕಲ್ ಅನ್ನು ಸಂಜೆ 6.45ಕ್ಕೆ ತಲುಪಲಿದೆ. ಇನ್ನೂ ನೀಲಕ್ಕಲ್ ನಿಂದ ಮಧ್ಯಾಹ್ನ 4 ಗಂಟೆಗೆ ಹೊರಟು, ಬೆಂಗಳೂರನ್ನು ರಾತ್ರಿ 10 ಗಂಟೆಗೆ ತಲುಪಲಿದೆ. ಈ ವೋಲ್ವೋ ಬಸ್ ಪ್ರಯಾಣ ದರ ರೂ.1,600 ನಿಗದಿ ಪಡಿಸಲಾಗಿದೆ.

 

 

LEAVE A REPLY

Please enter your comment!
Please enter your name here