ಪರಿಣಯಕ್ಕೆ ಒಪ್ಪದ ಪ್ರಣವ್-‌ಐದು ಕಂಪನಿಗಳ ಎಂಡಿ‌ ಯಿಂದ ಸಿನಿಮೀಯ ಪ್ರಯತ್ನ- ಟಿವಿ ನಿರೂಪಕನನ್ನು ಅಪಹರಿಸಿ ಮದುವೆಯಾಗಲು ಯತ್ನಿಸಿದ ತ್ರಿಶಾ

ಮಂಗಳೂರು(ಹೈದರಾಬಾದ್): ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ಟಿವಿ ಆ್ಯಂಕರೊಬ್ಬರನ್ನು ಉದ್ಯಮಿ ಯುವತಿಯೊಬ್ಬಳು ಅಪಹರಿಸಿ ಪೊಲೀಸರ ಅತಿಥಿಯಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಬಂಧಿತ ಯುವತಿಯನ್ನು ಐದು ಸ್ಟಾರ್ಟಪ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕಿ ಭೋಗಿರೆಡ್ಡಿ ತ್ರಿಶಾ ಎಂದು ಗುರುತಿಸಲಾಗಿದೆ. ಭೋಗಿರೆಡ್ಡಿ ತ್ರಿಶಾ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಟಿವಿ ಮ್ಯೂಸಿಕ್ ಚಾನೆಲ್ ನಿರೂಪಕ ಪ್ರಣವ್ ಪ್ರೊಫೈಲ್ ನೋಡಿ, ಬಳಿಕ ಮದುವೆಯ ಪ್ರಸ್ತಾಪ ಇಟ್ಟಿದ್ದಾರೆ. ಇದಕ್ಕೆ ಆ ಕಡೆಯಿಂದ ಒಪ್ಪಿಗೆಯೂ ಸಿಕ್ಕಿದೆ ಇದಾದ ಬಳಿಕ ಇಬ್ಬರೂ ಚಾಟ್ ಮಾಡಲು ಆರಂಭಿಸಿದ್ದಾರೆ. ಆದರೆ ಅದೆಷ್ಟೋ ತಿಂಗಳುಗಳು ಕಳೆದ ಬಳಿಕ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಪರಿಚಯವಾದ ಪ್ರಣವ್ ನಿಜವಾದ ಪ್ರಣವ್ ಆಗಿರಲಿಲ್ಲ. ಬದಲಿಗೆ ಬೇರೆ ಯಾರೋ ಪ್ರಣವ್‌ ಹೆಸರು ಮತ್ತು ಫೋಟೋ ಬಳಸಿ ಚಾಟ್‌ ಮಾಡುತ್ತಿದ್ದ ವಿಷಯ ತಿಳಿದುಬಂದಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಯುವತಿ ನಿಜವಾದ ಪ್ರಣವ್ ಅವರ ಮೊಬೈಲ್ ನಂಬರ್ ಪಡೆದು ಕರೆ ಮಾಡಿ ಈ ವಿಚಾರ ಹೇಳಿಕೊಂಡಿದ್ದಾರೆ. ಆದರೆ ಯುವತಿಯ ಮದುವೆಯ ವಿಚಾರವನ್ನು ಟಿವಿ ನಿರೂಪಕ ತಿರಸ್ಕರಿಸಿದ್ದಾನೆ. ಇದರಿಂದ ಮನನೊಂದ ಯುವತಿ ಪ್ರಣವ್ ನನ್ನು ಅಪಹರಣ ಮಾಡಲು ನಿರ್ಧರಿಸಿದ್ದಾಳೆ. ಅದಕ್ಕಾಗಿ ತ್ರಿಶಾ ತನ್ನ ಸ್ನೇಹಿತರ ಸಹಾಯವನ್ನು ಪಡೆದು ಪ್ರಣವ್ ನನ್ನು ಅಪಹರಣ ಮಾಡಿದ್ದಾಳೆ. ಈ ವೇಳೆ ಹೇಗೋ ಅಪಹರಣಕಾರರಿಂದ ತಪ್ಪಿಸಿಕೊಂಡ ಪ್ರಣವ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಪ್ರಣವ್ ಮಾಹಿತಿಯನ್ನು ಪಡೆದ ಪೊಲೀಸರು ಯುವತಿ ಹಾಗೂ ಆಕೆಯ ಜೊತೆಗಿದ್ದ ಇತರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ತಾನು ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ಪ್ರಣವ್ ಪ್ರೊಫೈಲ್ ನೋಡಿ ಮದುವೆಯ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾಳೆ. ಆದರೆ ಸತ್ಯ ವಿಷಯ ತಿಳಿದ ಬಳಿಕ ತಾನು ಪ್ರಣವ್ ನನ್ನೇ ಮದುವೆಯಾಗಲು ನಿರ್ಧರಿಸಿದ ಕಾರಣ ಆತನ ಬಳಿ ಇದ್ದ ವಿಚಾರ ಹೇಳಿಕೊಂಡಿದ್ದು ಇದಕ್ಕೆ ಪ್ರಣವ್ ಒಪ್ಪದೇ ಇದ್ದಾಗ ಅಪಹರಿಸಿ ಮದುವೆಯಾಗುವ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾಳೆ. ಅಷ್ಟು ಮಾತ್ರವಲ್ಲದೆ ಆತನ ಚಲನವಲನ ಪತ್ತೆಹಚ್ಚಲು ಟಿವಿ ಆ್ಯಂಕರ್‌ನ ಕಾರಿಗೆ ಯುವತಿ ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸಿ ಆತನನ್ನು ಹಿಂಬಾಲಿಸಲು ಮತ್ತು ಆತನ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದಳು ಎಂದು ಪೋಲೀಸರ ತನಿಖೆ ವೇಳೆ ತಿಳಿದು ಬಂದಿದೆ.

LEAVE A REPLY

Please enter your comment!
Please enter your name here