ಜೆಎಸ್‌ಡಬ್ಲೂ ಸಂಸ್ಥೆಯಿಂದ ಕರ್ನಾಟಕದ ಕಾರ್ಮಿಕರ ವಜಾ-ಪ್ರತಿಭಟನೆ-ಆತ್ಮಹತ್ಯೆಗೆ ಯತ್ನ

ಮಂಗಳೂರು: ನವ ಮಂಗಳೂರು ಬಂದರಿನಲ್ಲಿ ಕರ್ನಾಟಕದ ಕಾರ್ಮಿಕರಿಗೆ ಅನ್ಯಾಯ ಆಗಿದೆ ಎಂದು ಆರೋಪಿಸಿ ಕಾರ್ಮಿಕರು ಪಂಣಬೂರಿನ ಕಂಪನಿಯ ಗೇಟ್ ಮುಂದೆ ಪ್ರತಿಭಟನೆ ನಡೆಸಿದರು.

ಜೆಎಸ್‌ಡಬ್ಲೂ ಸಂಸ್ಥೆ ಕರ್ನಾಟಕದ ಕಾರ್ಮಿಕರನ್ನು ವಜಾ ಮಾಡಿದೆ ಎಂದು ಆರೋಪಿಸಿರುವ ಕಾರ್ಮಿಕರು ಕಂಪನಿಯ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕಾರ್ಮಿಕರಿಬ್ಬರು ಪಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಾದಾಮಿ ನಿವಾಸಿ ಎಲೆಲಿಂಗ ಮಾದರ್‌ ಹಾಗೂ ರೋಣ ನಿವಾಸಿ ಕರಿಯಪ್ಪ ಚೇಲುವಾಡಿ ಆತ್ಮಹತ್ಯೆಗೆ ಯತ್ನಿಸಿದ ಕಾರ್ಮಿಕರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here