ಪ್ರೇಮ ವೈಫಲ್ಯ – ಚಲಿಸುತ್ತಿದ್ದ ಬಸ್​ನಿಂದ ಹಾರಿ ಯುವ ಪ್ರೇಮಿ ಆತ್ಮಹತ್ಯೆ

ಮಂಗಳೂರು/ತಿರುಚ್ಚಿ: ಫೋನ್​ನಲ್ಲಿ ಮಾತನಾಡುತ್ತಾ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಯುವಕನೋರ್ವ ಬಸ್​ನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಿರುಚ್ಚಿಯಲ್ಲಿ ಬೆಳಕಿಗೆ ಬಂದಿದೆ. ಸಾವನ್ನಪ್ಪಿದ ಯುವಕನನ್ನು ಬಿ ವಿನೋದ್​ ಕುಮಾರ್​ (22) ಎಂದು ಗುರುತಿಸಲಾಗಿದೆ. ವಿನೋದ್​ ಕುಮಾರ್​ ತಿರುಚ್ಚಿಯ ತುರೈಯೂರ್​ನ ಹೂವಿನ ವ್ಯಾಪಾರಿಯಾಗಿದ್ದು, ಪೆರಂಬೂರಿನಿಂದ ತಿರುಚ್ಚಿಗೆ ಬರುತ್ತಿದ್ದ ಬಸ್​ ಏರಿದ್ದಾನೆ. ಬಸ್​ ಏರುವಾಗ ಆತ ಫೋನ್​ನಲ್ಲಿ ಮಾತನಾಡುತ್ತಿರುವುದನ್ನು ಪ್ರಯಾಣಿಕರು ಗಮನಿಸಿದ್ದಾರೆ.

ಪೆರಂಬೂರ್​ನ ಆಲತ್ತೂರ್​ ಬಳಿಕ ಅಡೈಕ್ಕಂಪಟ್ಟಿ ಬಳಿ ಬಸ್​ ಏರಿದ್ದ ವಿನೋದ್​ ಫೋನ್​ನಲ್ಲಿ ಮಾತನಾಡುತ್ತಲೇ ವೇಗವಾಗಿ ಚಲಿಸುತ್ತಿದ್ದ ಬಸ್​ನ ಫುಟ್​​ಬೋರ್ಡ್​​ಗೆ ಹೋಗಿ ಹೊರ ಜಿಗಿದಿದ್ದಾನೆ. ಇದರಿಂದ ಗಲಿಬಿಲಿಗೊಂಡ ಬಸ್‌ ಚಾಲಕ ತಕ್ಷಣ ಬಸ್‌ ನಿಲ್ಲಿಸಿದ್ದಾನೆ. ಅಷ್ಟರಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ವಿನೋದ್​ ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪಡಲೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಫೋನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಯುವಕ ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here