ಎಸ್ ಟಿ ಜನಾಂಗದ‌ ಶಾಪದಿಂದ ರಾಜ್ಯ ಸರಕಾರದ ಪತನ – ವಿಪಕ್ಷ ನಾಯಕ ಆರ್‌ ಅಶೋಕ್‌

ಮಂಗಳೂರು: ಹಿಂದೂಗಳ ವಿಚಾರದಲ್ಲಿ ಯಾವ ತ್ಯಾಗಕ್ಕೂ ನಾವು ಸಿದ್ದರಾಗಿದ್ದೇವೆ. ವಾಲ್ಮಿಕಿ‌ ನಿಗಮದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಸಿಎಂ‌ ಸಿದ್ದರಾಮಯ್ಯ ಕುಟುಂಬ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ವಿಪಕ್ಷ ನಾಯಕ ಆರ್‌ ಅಶೋಕ್‌ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಾಗುತ್ತದೆ. ಬೇನಾಮಿ‌ ವಿಚಾರ ಬಂದಾಗ ಕಾನೂನು ಪ್ರಕಾರ ಇ ಡಿ ಬಂದೇ ಬರುತ್ತದೆ. ಹವಾಲಾ ವ್ಯವಹಾರ ನಡೆದಾಗಲೂ ಇ ಡಿ ಬರುತ್ತದೆ. ರಾಜ್ಯ ಸರಕಾರ ಎಸ್ ಐ ಟಿ‌ ನೇಮಿಸಿ ಎಲ್ಲವನ್ನೂ ಮುಚ್ಚಿಹಾಕಲು ಮುಂದಾಗಿತ್ತು. ಈಗ ಇದೆಲ್ಲ ನಡೆಯಲ್ಲ. ಬಡವರಿಗೆ ಸಿಗಬೇಕಾದ ವಾಲ್ಮಿಕಿ ನಿಗಮದ‌ ಹಣ ತಿಂದಿದ್ದಾರೆ,ಅವರ ಶಾಪ ಇವರಿಗೆ ತಟ್ಟಲಿದೆ. ಎಸ್ ಟಿ ಜನಾಂಗದ‌ ಶಾಪದಿಂದಲೇ ಈ‌ ಸರಕಾರ ಪತನ ಆಗುತ್ತದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here