ಕೇಂದ್ರ ಸರ್ಕಾರದ ಬಜೆಟ್ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡಿದೆ – ಇದು ಅಧಿಕಾರ ಉಳಿಕೆಯ ಬಜೆಟ್ ಆಗಿದೆ – ಪ್ರತಿಭಟನಾ ಸಭೆಯಲ್ಲಿ ಹರೀಶ್ ಕುಮಾರ್ ಹೇಳಿಕೆ

ಮಂಗಳೂರು: ಮಂಗಳೂರಿನ ಮನಪ ಕಚೇರಿ ಮುಂಭಾಗದ ಗಾಂಧಿ ಪ್ರತಿಮೆ ಎದುರು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ನಡೆಯಿತು. ಪ್ರತಿಭಟನಾ ಸಭೆಯಲ್ಲಿ ಕೇಂದ್ರ ಸರ್ಕಾರದ ಬಜೆಟ್ ವಿರುದ್ಧ ಕಿಡಿ ಕಾರಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂಎಲ್ಸಿ ಹರೀಶ್ ಕುಮಾರ್, ಕೇಂದ್ರ ಸರ್ಕಾರದ ಬಜೆಟ್ ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡಿದೆ. ಹೆಚ್ಚು ಬಾರಿ ಬಜೆಟ್ ಮಂಡಿಸಿದ ವಿತ್ತಸಚಿವೆ, ಆದ್ರೆ ಈ ಬಜೆಟ್ ನಲ್ಲಿ ಏನು ಇಲ್ಲ ಖಾಲಿ ಖಾಲಿ ಬಜೆಟ್. ಕೇವಲ ಜನರಿಗೆ ಚೊಂಬು ಕೊಡುವ ಬಜೆಟ್ ಇದಾಗಿದೆ. ಕೇವಲ ಎರಡು ರಾಜ್ಯಗಳಿಗೆ ಮಾತ್ರ ಸಮಾಧಾನ ಪಡಿಸಲು ಮಂಡಿಸಿದ ಬಜೆಟ್ ಇದಾಗಿದ್ದು, ಕಳೆದ ಹತ್ತು ವರ್ಷಗಳಲ್ಲಿ ಇರದ ಎರಡು ರಾಜ್ಯದ ಮೇಲಿನ ಪ್ರೀತಿ ಈ ಬಾರಿ ಹೆಚ್ಚಾಗಿದೆ ಎಂದ ಅವರು, ಇದು ಅಧಿಕಾರ ಉಳಿಕೆಯ ಬಜೆಟ್ ಆಗಿದೆ. ಬೆಳ್ತಂಗಡಿಯಲ್ಲಿಮಿನಿ ವಿಮಾನ ನಿಲ್ದಾಣ ಮಾಡ್ತೇನೆ ಅನುದಾನ ಬಿಡುಗಡೆ ಆಗಿದೆ ಎಂದು ವಿಮಾನ ಬಿಟ್ಟರು. ಜಿಲ್ಲಾ ಪಂಚಾಯತ್ ಸಭೆಯಲ್ಲಿ ಕಾರ್ಕಳ, ಸುಬ್ರಹ್ಮಣ್ಯ, ಧರ್ಮಸ್ಥಳ ಭಾಗದಲ್ಲಿ ರೈಲು ಪ್ರಾರಂಭ ಎಂದು ರೈಲು ಬಿಟ್ಟ್ರು. ಬೆಳ್ತಂಗಡಿ ಶಾಸಕರು ಅದೆಷ್ಟೋ ರೈಲು ಬಿಡ್ತಾರೋ ಗೊತ್ತಿಲ್ಲ. ಕೇವಲ ಪ್ರಚಾರ ಪಡೆಯುದು ಬಿಟ್ಟರೇ ಕಾರಗಯಗಳು ಯಾವುದು ಈವರೆಗೆ ಆಗಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಇದನ್ನೇ ಮಾಡಿದ್ದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂಎಲ್ಸಿ ಹರೀಶ್ ಕುಮಾರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here