ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನ- ಆರೋಪಿಗಳ ಬಂಧನ

ಮಂಗಳೂರು: ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಕಳವು ಮಾಡಿದ ಆರೋಪಿಗಳನ್ನು ಕೊಣಾಜೆ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಮೊಹಮ್ಮದ್ ರಿಯಾಜ್ ಯಾನೆ ಬೆಬ್ಬೆ ರಿಯಾಜ್ ಹಾಗೂ ಮೊಹಮ್ಮದ್ ನಿಜಮುಲಹಕ್ ಬಂಧಿತ ಆರೋಪಿಗಳು.ಕೋಣಾಜೆ ಠಾಣೆಯ ಪಿ.ಎಸ್.ಐ ವಿನೋದ , ಸಿಬ್ಬಂದಿಗಳಾದ ಬಸವನಗೌಡ, ಸುರೇಶ್ ಜೊತೆ ಕುರ್ನಾಡು ಮಿತ್ತಕೋಡಿ ಬಳಿ ಆರೋಪಿಗಳನ್ನು  ಬಂಧಿಸಿದ್ದು,ಕೃತ್ಯಕ್ಕೆ ಉಪಯೋಗಿದ ಎರಡು ಆಟೋ ರಿಕ್ಷಾ ಮತ್ತು 325 ಕೆಜಿ ಸುಲಿದ ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಜು.18ರಂದು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನಾಟೆಕಲ್ ಎಂಬಲ್ಲಿ ಅಡಿಕೆ ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿತ್ತು.

 

LEAVE A REPLY

Please enter your comment!
Please enter your name here