ಉಕ್ಕಿ ಹರಿದ ಫಾಲ್ಗುಣಿ-‌ ನೆರೆ ಪೀಡಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

ಮಂಗಳೂರು:ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳೂರು ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿದೆ.ನಗರದ ಕೂಳೂರು ಭಾಗ ಜಲಾವೃತಗೊಂಡಿದೆ.

ಉಕ್ಕಿ ಹರಿದ ಫಾಲ್ಗುಣಿ ನದಿ ನೀರು ಗ್ರಾಮಗಳಿಗೆ ನುಗ್ಗಿದ್ದು ಸ್ಥಳೀಯ ನಿವಾಸಿಗಳನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ.ನೆರೆ ಪೀಡಿತ ಪ್ರದೇಶ ಕೂಳೂರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಂಗಳೂರು ಎ.ಸಿ ಹರ್ಷವರ್ಧನ್, ಮನಪ ಆಯುಕ್ತ ಆನಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆರೆ ಪೀಡಿತ ಪ್ರದೇಶದಲ್ಲಿ ಮನೆಯಲ್ಲಿ ಉಳಿದುಕೊಂಡವರನ್ನು ಸ್ಥಳೀಯ ಗಂಜಿಕೇಂದ್ರಗಳಿಗೆ ತೆರಳುವಂತೆ  ಅಧಿಕಾರಿಗಳು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here