ಪ್ರಸ್ಥಕ್ಕೂ ಮುನ್ನ ನವದಂಪತಿಗಳ ಹೊಡೆದಾಟ -ಚಟ್ಟವೇರಿದ ಮಧುಮಂಚ ಏರಬೇಕಿದ್ದ ವಧು

ಮಂಗಳೂರು (ಬೆಂಗಳೂರು): ಮದುವೆಯಾದ ಕೆಲವೇ ಗಂಟೆಗಳಲ್ಲಿ ನವದಂಪತಿ ಹೊಡೆದಾಡಿಕೊಂಡಿದ್ದು, ಗಾಯಗೊಂಡಿದ್ದ ನವ ವಧು ದುರಂತ ಸಾವು ಕಂಡಿದ್ದಾಳೆ.

ಲಿಖಿತ ಶ್ರೀ(20) ಹಾಗೂ ನವೀನ್ (29) ಆ. 07ರಂದು ಸಪ್ತಪದಿ ತುಳಿದಿದ್ದಾರೆ. ಆದರೆ ಅದೇನಾಯ್ತೋ ಏನೋ ರೂಮ್ಗೆ ಹೋಗಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವಧು ಲಿಖಿತ ಶ್ರೀ ಸಾವನ್ನಪ್ಪಿರುವ ಘಟನೆ ಕೋಲಾರದ ಚುಂಬರಸನ ಹಳ್ಳಿಯಲ್ಲಿ ನಡೆದಿದೆ. ಗಾಯಗೊಂಡಿರುವ ವರ ನವೀನ್ ಸ್ಥಿತಿ ಗಂಭೀರವಾಗಿದ್ದು, ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಬೆಳಿಗ್ಗೆ ನವೀನ್‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಆ.7ರಂದು ಬೆಳಗ್ಗೆ 6 ಗಂಟೆಗೆ ಮದುವೆ ಆಗಿದೆ. ನಾನು ಆ ಹುಡುಗಿ ಇಲ್ಲ ಅಂದ್ರೆ ಬದುಕಲ್ಲ ಅಂತ ಹೇಳಿದ್ದ. ಅದಕ್ಕೆ ನಾವು ಅವಳ ಜೊತೆ ಮದುವೆ ಮಾಡಿದ್ದೇವೆ. ಕಾಲುಂಗುರ ಹಾಗೂ ತಾಳಿ ಬೊಟ್ಟು ನಾವೇ ಕೊಟ್ಟಿದ್ದೇವೆ. ಇಬ್ಬರು ಸಂಜೆ 5 ಗಂಟೆಗೆ ಟೀ ಕುಡಿದು ಪಕ್ಕದ ಮನೆಗೆ ಹೋಗಿದ್ದಾರೆ. ಆ ಮನೆಯ ರೂಮಿನ ಬಾಗಿಲು ಹಾಕಿಕೊಂಡಿದ್ದಾರೆ. ದಿಢೀರನೇ ಹುಡುಗಿ ಕೂಗಿದ ಶಬ್ದ ಕೇಳಿಸಿತು. ಸಾವಿಗೆ ಏನು ಕಾರಣ ಅಂತ ಗೊತ್ತಾಗಲಿಲ್ಲ. ಬಾಗಿಲು ನೂಕಿ ಒಳಗೆ ಹೋದಾಗ ಇಬ್ಬರಿಗೂ ಗಾಯವಾಗಿ ಕೆಳಗೆ ಬಿದ್ದಿದ್ರು. ನಮಗೂ ಕಾರಣ ಗೊತ್ತಾಗ್ತಿಲ್ಲ, ಇಬ್ಬರು ಒಬ್ಬರಿಗೊಬ್ಬರು ಇಷ್ಟ ಪಟ್ಟು ಮದುವೆ ಆಗಿದ್ದಾರೆ. ಅವರ ಅಪ್ಪ ಅಮ್ಮ ಸಹ ಘಟನೆ ವೇಳೆ ಇಲ್ಲೇ ಇದ್ರು. ಹುಡುಗನಿಗೆ 28 ವರ್ಷ ಆಗಿತ್ತು. ಹುಡುಗಿಗೆ 20 ವರ್ಷ ಆಗಿತ್ತು. ನವೀನ್ ರಾಜ್ ಪೇಟೆ ರಸ್ತೆಯಲ್ಲಿ ಬಟ್ಟೆ ಅಂಗಡಿ ಹಾಕಿಕೊಂಡು ಕೆಲಸ ಮಾಡುತ್ತಿದ್ದು, ಹುಡುಗಿ ದ್ವಿತೀಯ ಪಿಯುಸಿ ಓದುತ್ತಿದ್ದಳು ಎಂದು  ಮೃತ ನವೀನ್​ ಸಂಬಂಧಿ ಮಾಹಿತಿ ನೀಡಿದ್ದಾರೆ.

ಈ ಕುರಿತು ವಧುವಿನ ತಂದೆ ದೂರು ದಾಖಲಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ರೂಮ್​ಗೆ ಹೋದಾಗ, ಇಬ್ಬರ ನಡುವೆ ಮನಸ್ಥಾಪ ಬಂದು, ವರ ನವೀನ್ ಹರಿತವಾದ ಆಯುಧದಿಂದ ಹೊಡೆದಿರುವುದು ತಿಳಿದು ಬಂದಿದೆ. ಇನ್ನು ಎಲ್ಲರೂ ಬರುವಷ್ಟರಲ್ಲಿ ನವೀನ್ ತನ್ನ ಮೇಲೇ ತಾನೇ ಹಲ್ಲೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here