ಜಾಲ್ಸೂರು: ಗ್ರಾ.ಪಂ. ಹಾಗೂ ಸೇವಾಭಾರತಿ ವತಿಯಿಂದ ಬಡ ಮಹಿಳೆಗೆ ಮನೆ ನಿರ್ಮಾಣಕ್ಕೆ ಭೂಮಿಪೂಜೆ

ಜಾಲ್ಸೂರು ಗ್ರಾಮದ ಕುಂದ್ರುಕೋಡಿಯಲ್ಲಿ ಬಡ ಮಹಿಳೆಯೋರ್ವರಿಗೆ ಗ್ರಾಮ ಪಂಚಾಯತಿ ವಸತಿ ಅನುದಾನ ಹಾಗೂ ಸೇವಾ ಭಾರತಿಯ ವತಿಯಿಂದ ನಿರ್ಮಿಸಿಕೊಡಲಿರುವ ಮನೆ ನಿರ್ಮಾಣದ ಭೂಮಿಪೂಜೆಯು ನ.2ರಂದು ಜರುಗಿತು.


ಕುಂದ್ರುಕೋಡಿಯ ಲಕ್ಷ್ಮೀ ಎಂಬವರಿಗೆ ವಸತಿ ನಿರ್ಮಾಣಕ್ಕಾಗಿ ಗ್ರಾಮ ಪಂಚಾಯತಿ ಅಂಬೇಡ್ಕರ್ ವಸತಿ ಯೋಜನೆಯ ಅನುದಾನ ಹಾಗೂ ಸೇವಾಭಾರತಿಯ ಸಹಕಾರದಿಂದ ಮನೆ ನಿರ್ಮಾಣಗೊಳ್ಳಲಿದ್ದು, ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎಂ. ಬಾಬು ಅವರು ಗುದ್ದಲಿಪೂಜೆ ನೆರವೇರಿಸಿದರು.


ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಸೇವಾ ಪ್ರಮುಖರಾದ ನ. ಸೀತಾರಾಮ, ಚಂದ್ರಶೇಖರ ತಳೂರು, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯರಾಮ ರೈ ಜಾಲ್ಸೂರು, ಜಾಲ್ಸೂರು ಗ್ರಾ.ಪಂ. ಸದಸ್ಯ ಎ‌ನ್.ಎಂ. ಸತೀಶ್ ಕೆಮನಬಳ್ಳಿ, ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮೊಕ್ತೇಸರ ಗುರುರಾಜ್ ಭಟ್, ಸೇವಾ ಭಾರತಿಯ ಪ್ರಮುಖರಾದ ರಾಜೇಶ್ ರೈ ಮೇನಾಲ, ಮನೋಜ್ ಅಡ್ಡಂತಡ್ಕ, ಶರತ್ ಅಡ್ಕಾರು, ಸುಖೇಶ್ ಅಡ್ಕಾರುಪದವು, ಮಾದವ ಗೌಡ ಕಾಳಮನೆ, ಕನಕಮಜಲು ಸಹಕಾರಿ ಸಂಘದ ನಿರ್ದೇಶಕ ಕರುಣಾಕರ ರೈ ಕುಕ್ಕಂದೂರು, ಲಕ್ಷ್ಮೀ ಕುಂದ್ರುಕೋಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here