ಸ್ಥಿರಾಸ್ತಿ ನೋಂದಾವಣೆ ಆದ ಬಳಿಕ ತನ್ನಿಂತಾನೆ ಖಾತೆ ಬದಲಾವಣೆ: ಕಂದಾಯ ಇಲಾಖೆಗೆ ಖರೀದಿದಾರರು ಪ್ರತ್ಯೇಕ ಮಾಹಿತಿ ನೀಡಬೇಕಾಗಿಲ್ಲ

ಮಂಗಳೂರು: ನೋಂದಾಯಿತ ದಸ್ತಾವೇಜು ಮೂಲಕ ಸ್ಥಿರಾಸ್ತಿ ನೋಂದಾವಣೆ ಆದ ಬಳಿಕ ಖರೀದಿದಾರರು ಕಂದಾಯ ಇಲಾಖೆಗೆ ಪ್ರತ್ಯೇಕ ಅರ್ಜಿ ನೀಡಬೇಕಾಗಿಲ್ಲ. ಭೂಕಂದಾಯ ಕಾಯ್ದೆಯ ಸೆಕ್ಷನ್ 128(4) ಪ್ರಕಾರ ಖಾತೆ ಬದಲಾವಣೆಯನ್ನು ಕಂದಾಯ ಇಲಾಖೆ ಮಾಡತಕ್ಕದ್ದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಹೈಕೋರ್ಟ್‌ನ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.‌

LEAVE A REPLY

Please enter your comment!
Please enter your name here