ಪ್ರೀತ್ಸೆ ಪ್ರೀತ್ಸೆ ಅಂದವನಿಗೆ ನೋ ಎಂದ ಯುವತಿಯ ಕತ್ತು ಸೀಳಿ ಹತ್ಯೆ

ಬೆಂಗಳೂರು :ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯನ್ನು ಬೈಕ್‌ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ಸಿಲಿಕಾನ್‌ ಸಿಟಿಯ ರಾಜಾನುಕುಂಟೆ ಸಮೀಪದ ಶಾನುಭೋಗನ ಹಳ್ಳಿಯಲ್ಲಿ ಜ.17ರಂದು ಸಂಜೆ ನಡೆದಿದೆ. ಯಲಹಂಕದ ಕಾಲೇಜೊಂದರಲ್ಲಿ ಪ್ರಥಮ ಬಿಎ ವ್ಯಾಸಾಂಗ ಮಾಡುತ್ತಿದ್ದ ಶಾನುಬೋಗರ ಹಳ್ಳಿ ಗ್ರಾಮದ ರಾಶಿ (20) ಎಂಬ ಯುವತಿ ಹತ್ಯೆಗೀಡಾದವರು. ಪ್ರೀತಿ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎನ್ನಲಾಗಿದೆ. ರಾಜಾನುಕುಂಟೆ ಪೊಲೀಸರು ಪ್ರಕರಣ ದಾಕಲಿಸಿಕೊಂಡಿದ್ದು ಆರೋಪಿಗಳ ಶೋಧ ಆರಂಭಿಸಿದ್ದಾರೆ.

LEAVE A REPLY

Please enter your comment!
Please enter your name here