ಮಂಗಳೂರು ವಿವಿಯಿಂದ 3 ಮಂದಿ ಸಾಧಕರಿಗೆ ಗೌರವ ಡಾಕ್ಟರೇಟ್

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 41ನೇ ಘಟಿಕೋತ್ಸವದ ಸಂದರ್ಭದಲ್ಲಿ ಕಣಚ್ಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು.ಕೆ ಮೋನು ಕೃಷಿ ಕ್ಷೇತ್ರ ಮತ್ತು ಸಮಾಜ ಸೇವಾ ಕ್ಷೇತ್ರದ ಸಾಧಕ ಕುಂದಾಪುರ ಗಂಗೊಳ್ಳಿಯ ಜಿ. ರಾಮಕೃಷ್ಣ ಆಚಾರ್‌ ಮತ್ತು ಮಂಗಳೂರಿನ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ  ಪ್ರೊ.ಎಂ.ಬಿ ಪುರಾಣಿಕ್‌ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲು ವಿವಿ ಕುಲಾಧಿಪತಿ ಅನುಮೋದನೆ ನೀಡಿದ್ದಾರೆ ಎಂದು ವಿವಿಯ ಕುಲಪತಿ ಪ್ರೊ.ಪಿ.ಎಸ್‌ ಯಡಪಡಿತ್ತಾಯ ತಿಳಿಸಿದ್ದರೆ. ಮಾ.15ರಂದು ನಡೆಯುವ ಮಂಗಳೂರು ವಿವಿ ಯ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು.

LEAVE A REPLY

Please enter your comment!
Please enter your name here