ರಂಗೇರಿದ ಚುನಾವಣಾ ಕಣ – ಸಚಿವ ಮುನಿರತ್ನ ಪ್ರಚೋದನಕಾರಿ ಭಾಷಣ

ಮಂಗಳೂರು: ಆರ್ ಆರ್ ನಗರ ಶಾಸಕ, ಸಚಿವ ಮುನಿರತ್ನ ಬಹಿರಂಗವಾಗಿ ಹಿಂಸೆಗೆ ಕರೆ ನೀಡಿ ಪ್ರಚೋದಿಸಿರುವ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.


ಆರ್ ಆರ್ ನಗರದ ಜಾಲಹಳ್ಳಿ ವಾರ್ಡಿನ ಖಾತಾನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಿಳಿನಲ್ಲಿ ಮಾತನಾಡಿದ ಮುನಿರತ್ನ ಯಾರಾದರೂ ಬಂದ್ರೆ ಅಟ್ಟಾಡಿಸಿ ಹೊಡೆಯಿರಿ. ಯಾರೂ ಬಂದ್ರು ಹೊಡೆಯಿರಿ, ಉಳಿದದ್ದು ನಾನು ನೋಡಿಕೊಳ್ತೇನೆ, ಹೇಗೆ ಹೊಡಿಬೇಕೆಂದರೆ ಅವರು ತಿರುಗಿ ನೋಡದೆ ಒಡಬೇಕು ಎಂದು ಹೇಳಿದ್ದಾರೆ. ಕನ್ನಡದ ನೆಲದಲ್ಲಿ ನಿಂತು ತಮಿಳು – ಕನ್ನಡ ಮಾತನಾಡುವವರ ಮದ್ಯೆ ತಮಿಳಿನಲ್ಲಿ ಈ ರೀತಿ ಪ್ರಚೋದನಕಾರಿಯಾಗಿ ಮಾತನಾಡಿರುವ ಮುನಿರತ್ನ ವಿರುದ್ಧ ಕುಸುಮಾ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here