ಈಜಲು ತೆರಳಿದ 6 ವಿದ್ಯಾರ್ಥಿಗಳು-ಮೂವರು ನೀರುಪಾಲು

ಮಂಗಳೂರು : ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಶ್ರೀನಿವಾಸಪುರ ಡ್ಯಾಮ್ ಗೆ ವೀಕ್ ಎಂಡ್ ಟ್ರಿಪ್ ಬಂದಿದ್ದ 6 ವಿದ್ಯಾರ್ಥಿಗಳ ತಂಡದ ಮೂರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತ ವಿದ್ಯಾರ್ಥಿಗಳನ್ನು ಪೂಜಾ, ರಾಧಿಕ ಮತ್ತು ಇಮ್ರಾನ್ ಎಂದು ಗುರುತಿಸಲಾಗಿದೆ. ಡ್ಯಾಮ್ ನೀರಲ್ಲಿ ಈಜಲು ನೀರಿಗಿಳಿದಿದ್ದಾಗ ಈ ದುರಂತ ಸಂಭವಿಸಿದೆ.

ಬೆಂಗಳೂರಿನಲ್ಲಿ ಡಿ ಫಾರ್ಮ್ ಓದುತ್ತಿದ್ದ 6 ವಿದ್ಯಾರ್ಥಿಗಳು ಶ್ರೀನಿವಾಸಪುರ ಡ್ಯಾಮ್ ಗೆ ಬೈಕ್ ನಲ್ಲಿ ಬಂದಿದ್ದು ಮದ್ಯಾಹ್ನದ ವೇಳೆ ಈಜಲು ನೀರಿಗಿಳಿದಿದ್ದಾರೆ. 6 ಮಂದಿ ಒಬ್ಬರನ್ನೊಬ್ಬರ ಕೈ ಹಿಡಿದು ನೀರಿನ ಆಳ ಜಾಗಕ್ಕೆ ಹೋಗಿದ್ದಾರೆ. ಈ ಸಂಧರ್ಭದಲ್ಲಿ ಒಬ್ಬರು ಕಾಲು ಜಾರಿ ನೀರಿಗೆ ಬಿದ್ದಿದ್ದು ಅವರನ್ನು ರಕ್ಷಣೆ ಮಾಡಲು ಉಳಿದವರು ಒಬ್ಬರ ಕೈ ಒಬ್ಬರು ಹಿಡಿದು ಸರಪಳಿ ಮಾದರಿಯಲ್ಲಿ ಯತ್ನಿಸಿದ್ದಾರೆ. ಈ ಪ್ರಯತ್ನದ ವೇಳೆ ಮತ್ತಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಮೂವರು ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here