ಕ್ಷಣಾರ್ಧದಲ್ಲಿ ಹಣ ಎಗರಿಸಿ ಪರಾರಿಯಾದ ಕಳ್ಳ

ಮಂಗಳೂರು: ನಗರದ ಮೀನುಗಾರಿಕೆ ಬಂದರು ದಕ್ಕೆಯಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಯಿಂದ ಅಪರಿಚಿತನೊಬ್ಬ ಒಂದೂವರೆ ಲಕ್ಷ ರೂಪಾಯಿ ಕಸಿದು ಪರಾರಿಯಾದ ಘಟನೆ ಏ.1ರಂದು ನಡೆದಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳಿಗ್ಗೆ 6:45ರ ಸುಮಾರಿಗೆ ಮೀನು ಖರೀದಿಗೆ ಬಂದಿದ್ದ ವ್ಯಾಪಾರಿಯ ಕೈಯ್ಯಲ್ಲಿದ್ದ ಒಂದೂವರೆ ಲಕ್ಷ ರೂಪಾಯಿಗಳಿದ್ದ ಬ್ಯಾಗನ್ನು ಎಗರಿಸಿದ ಕಳ್ಳ ಕಣ್ತಪ್ಪಿಸಿ ಓಡಿ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಸಿಸಿಟಿವಿ ‌ಫುಟೇಜ್ ಆಧಾರದ ಹಿನ್ನೆಲೆಯಲ್ಲಿ ಆರೋಪಿಯನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here