ಉಹಾಪೋಹಗಳಿಗೆ ತೆರೆ – ಸಿ ಎಂ ಬೊಮ್ಮಾಯಿಗೆ ಬೆಂಬಲ ಘೋಷಿಸಿದ ಕಿಚ್ಚ

ಮಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವ ನನಗೆ ಇಷ್ಟ. ಆದ್ದರಿಂದ ನಾನು ಅವರಿಗೆ ಬೆಂಬಲ ಕೊಡೋದಕ್ಕೆ ಇಷ್ಟ ಪಡುತ್ತೇನೆ’ ಎಂದು ನಟ ಸುದೀಪ್  ಹೇಳಿದ್ದಾರೆ. 

ನಗರದ ಖಾಸಗಿ ಹೋಟೆಲ್ ನಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಸವರಾಜ ಬೊಮ್ಮಾಯಿ ನನಗೆ ಚಿಕ್ಕಂದಿನಿಂದಲೂ ಪರಿಚಯ. ಬೊಮ್ಮಾಯಿ ವ್ಯಕ್ತಿತ್ವಕ್ಕೆ ಬೆಲೆ ಕೊಡುತ್ತೇನೆ’ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ‘ಸುದೀಪ್ ಅವರು ನನ್ನ ಜೊತೆ ನಮ್ಮ ಪಕ್ಷದ ಪರವಾಗಿಯೂ ಪ್ರಚಾರ ಮಾಡಲಿದ್ದಾರೆ’ ಎಂದು ಹೇಳಿದರು. ‘ನಾನು ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡುತ್ತಿಲ್ಲ, ಯಾರಿಗೂ ಟಿಕೆಟ್ ಕೇಳಿಲ್ಲ, ಪಕ್ಷದಿಂದ ಟಿಕೆಟ್ ಕೊಡುವಷ್ಟು ದೊಡ್ಡವನಲ್ಲ’ ಎಂದು ಸುದ್ದಿಗೋಷ್ಠಿಗೂ ಮುನ್ನ ನಟ ಸುದೀಪ್ ಹೇಳಿಕೆ ನೀಡಿದ್ದರು. ಇದರೊಂದಿಗೆ ಪಕ್ಷ ಸೇರುವ ಬಗೆಗಿನ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಈ ನಡುವೆ ಸುದೀಪ್‌ ಗೆ ಸಂಬಂಧ ಪಟ್ಟಖಾಸಗಿ ವಿಡಿಯೋ ರಿಲೀಸ್‌ ಮಾಡುವುದಾಗಿ ಪತ್ರವೊಂದು ಬಂದಿದ್ದು ಪುಟ್ಟೇನಹಳ್ಳಿ  ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 

LEAVE A REPLY

Please enter your comment!
Please enter your name here