ದೋಣಿಗಲ್‌ ನಲ್ಲಿ ಗುಡ್ಡ ಕುಸಿತ – ಮಣ್ಣಿನಡಿ ಸಿಲುಕಿಕೊಂಡ ಓಮಿನಿ ಕಾರು

ಮಂಗಳೂರು/ಸಕಲೇಶಪುರ: ಸಕಲೇಶಪುರ ಸಮೀಪದ ದೋಣಿಗಲ್‌ ನಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತ ಸಂಭವಿಸಿದೆ.

ಗುಡ್ಡ ಕುಸಿತದಿಂದಾಗಿ ಓಮಿನಿ ಕಾರೊಂದು ಪ್ರಯಾಣಿಕರ ಸಹಿತ ಮಣ್ಣಿನಡಿ ಸಿಲುಕಿಕೊಂಡಿದೆ. ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರನ್ನು ರಕ್ಷಿಸಲಾಗಿದೆ. ರಸ್ತೆ ಸಂಚಾರ ಸಂಪೂರ್ಣ ಬ್ಲಾಕ್‌ ಆಗಿದ್ದು ಎರಡೂ ಕಡೆಗಳಲ್ಲಿ ವಾಹನಗಳು ಕಿ.ಮೀ ಗಟ್ಟಲೆ ಸಾಲುಗಟ್ಟಿ ನಿಂತಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

LEAVE A REPLY

Please enter your comment!
Please enter your name here