ಗುಡ್ ಫ್ರೈಡೆ ದಿನ ಮನೆಗೆ ಕನ್ನ

ಮಂಗಳೂರು : ಪ್ರಾರ್ಥನೆ ಸಲ್ಲಿಸಲು ಚರ್ಚಿಗೆ ಹೋಗಿದ್ದ ವೇಳೆ ಮನೆಯಲ್ಲಿದ್ದ ನಗದು ಹಣ ಮತ್ತು ಚಿನ್ನಾಭರಣ ಕಳವು ಮಾಡಿದ ಘಟನೆ ಕುಡುಪು ಪೆದಮಲೆಯಲ್ಲಿ ನಡೆದಿದೆ. ಪ್ರವೀಣ್ ಮೆಂತೆರೋ ಎಂಬವರು ಗುಡ್ ಫ್ರೈಡೆ ಪ್ರಯುಕ್ತ ಏಪ್ರಿಲ್ 7 ರಂದು ಮನೆಗೆ ಬೀಗ ಹಾಕಿ ಕುಟುಂಬ ಸಮೇತ ಚರ್ಚಿಗೆ ತೆರಳಿದ್ದರು.

ಪ್ರಾರ್ಥನೆ ಮುಗಿಸಿ ಮನೆಗೆ ವಾಪಸ್ ಆದಾಗ ಮನೆಯ ಹಂಚುಗಳನ್ನು ತೆಗೆದು ಯಾರೋ ಮನೆಯೊಳಗಡೆ ಪ್ರವೇಶಿಸಿ ಕಳವು ಮಾಡಿರುವುದು ಬೆಳಕಿಗೆ ಬಂದಿದೆ. ಬೀಗ ಹಾಕಿದ್ದ ಕಬ್ಬಿಣದ ಕಪಾಟಿನ ಬಾಗಿಲು ಮುರಿದು ಬ್ಯಾಗಿನಲ್ಲಿದ್ದ 20 ಗ್ರಾಂ ನ ಚಿನ್ನದ ಸರ, 8 ಗ್ರಾಂ ನ ಚಿನ್ನದ ಒಂದು ಜೊತೆ ಬೆಂಡೋಲೆ, 4 ಗ್ರಾಂ ನ ಉಂಗುರ, 4000 ರೂ ನಗದನ್ನು ಕಳವು ಮಾಡಿದ್ದಾರೆ. ಕಳವಾದ ಆಭರಣಗಳ ಒಟ್ಟು ಮೌಲ್ಯ 1.20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here