ಕಾಂಗ್ರೆಸ್ ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಐದನೇ ಪಟ್ಟಿ ಬುಧವಾರ ರಾತ್ರಿ ಬಿಡುಗಡೆ ಮಾಡಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲಾಗಿದ್ದು ಮೊಹಮ್ಮದ್ ಯೂಸುಫ್ ಸವಣೂರು ಬದಲಿಗೆ ಯಾಸಿರ್ ಅಹಮದ್ ಖಾನ್ ಪಠಾಣ ಹೆಸರು ಘೋಷಿಸಲಾಗಿದೆ.

ಇನ್ನು ತೀವ್ರ ಕುತೂಹಲಕ್ಕೆ ಕಾರಣವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿ ಇನಾಯತ್ ಅಲಿ ಹೆಸರನ್ನು ಘೋಷಿಸಿದೆ. ಇನ್ನುಳಿದಂತೆ ರಾಯಚೂರು ನಗರ ಅರಕಲಗೂಡು ಸಿವಿ ರಾಮನ್ ನಗರ ಮತ್ತು ಶಿಡ್ಲಘಟ್ಟ ಕ್ಷೇತ್ರಗಳಿಗೆ ಹೆಸರು ಘೋಷಣೆ ಬಾಕಿ ಉಳಿದಿದೆ.
1. ಪುಲಕೇಶಿ ನಗರ – ಎ ಸಿ ಶ್ರೀನಿವಾಸ್
2. ಮುಳಬಾಗಿಲು – ಡಾ. ಮುದ್ದು ಗಂಗಾಧರ್
3. ಶಿಗ್ಗಾವಿ- ಯಾಸಿರ್ ಅಹಮದ್ ಖಾನ್ ಪಠಾಣ್
4. ಕೆಆರ್ ಪುರಂ – ಮೋಹನ್ ಬಾಬು
5. ಮಂಗಳೂರು ನಗರ ಉತ್ತರ – ಇನಾಯತ್ ಅಲಿ

ಪಟ್ಟಿ ಇಂತಿದೆ….

LEAVE A REPLY

Please enter your comment!
Please enter your name here