ಒಡಿಶಾ ರೈಲು ದುರಂತ-ಮಗನಿಗಾಗಿ ತಂದೆಯ ಹುಡುಕಾಟ-ಹೃದಯ ಹಿಂಡುವ ವಿಡಿಯೋ ವೈರಲ್

ಮಂಗಳೂರು: ಮಂಜಾದ ಕಣ್ಣು, ಅರಿವಿಲ್ಲದೆ ಉದುರುವ ಕಣ್ಣೀರು, ಹೆಣಗಳ ರಾಶಿಯ ನಡುವೆ ಪ್ರತಿ ಹೆಣದ ಮುಸುಕು ಸರಿಸಿ ಮಗನೇ ಎಲ್ಲಿದ್ದೀಯ ಎಂದು ತನ್ನ ಮಗನಿಗಾಗಿ ಹುಡುಕಾಟ ನಡೆಸುತ್ತಿರುವ ತಂದೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಒಡಿಶಾ ರೈಲು ದುರಂತದಲ್ಲಿ ಮಗನನ್ನು ಕಳೆದುಕೊಂಡ ತಂದೆ ಮಗನಿಗಾಗಿ ಶವಗಾರದಲ್ಲಿ ಹುಡುಕಾಡುವ ಈ ದೃಶ್ಯ ಎಂಥವರ ಕಲ್ಲು ಮನಸ್ಸನ್ನು ಕಲಕುವಂತಿದೆ. ಹೃದಯ ಹಿಂಡುವ ಈ ದೃಶ್ಯ ನೋಡಿದ ಮೇಲೆ ಎಲ್ಲರ ಬಾಯಲ್ಲಿ ಬರುವ ಮಾತೊಂದೇ….. ದುರಂತಗಳು ಸಂಭವಿಸದಿರಲಿ, ಯಾವ ತಂದೆಗೂ ಈ ಸ್ಥಿತಿ ಬಾರದಿರಲಿ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here