ಗೆಳತಿಯನ್ನು ಕೊಂದು ಕತ್ತರಿಸಿ ಕುಕ್ಕರ್ ನಲ್ಲಿ ಬೇಯಿಸಿದ ಪ್ರಿಯಕರ

ಮಂಗಳೂರು(ಮುಂಬೈ): ವ್ಯಕ್ತಿ ಒಬ್ಬ ತನ್ನ ಲಿವ್ ಇನ್ ಸಂಗಾತಿಯನ್ನು ಹತ್ಯೆ ಮಾಡಿ ದೇಹದ ಭಾಗವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿರುವ ಭೀಭತ್ಸ ಘಟನೆ ಮುಂಬೈನಲ್ಲಿ ನಡೆದಿದೆ. ತನ್ನ ಲಿವ್ ಇನ್ ಗೆಳತಿ ಸರಸ್ವತಿ ವೈದ್ಯ ಎಂಬವಳನ್ನು ಕೊಲೆ ಮಾಡಿದ ಆರೋಪಿಯನ್ನು ಮನೋಜ್ ಸಹಾನಿ(56) ಎಂದು ಗುರುತಿಸಲಾಗಿದೆ.

ಕಳೆದ ಮೂರು ವರ್ಷಗಳಿಂದ ಗೀತಾ ನಗರದ ಪ್ಲಾಟ್ ಒಂದರಲ್ಲಿ ಸರಸ್ವತಿ ವೈದ್ಯ ಮತ್ತು ಮನೋಜ್ ಸಹಾನಿ ಜೊತೆಯಲ್ಲಿ ವಾಸಿಸುತ್ತಿದ್ದರು.

ಮರ ಕಟ್ ಮಾಡುವ ಮಿಷನ್ ನಿಂದ ದೇಹವನ್ನು ತುಂಡು ಮಾಡಲಾಗಿದ್ದು, ಶಂಕಿತ ಆರೋಪಿ ಸಾಕ್ಷಿ ನಾಶ ಪಡಿಸುವ ಸಲುವಾಗಿ ಈ ರೀತಿ ದೇಹದ ಭಾಗವನ್ನು ಕುಕ್ಕರ್ ನಲ್ಲಿ ಬೇಯಿಸಿರಬಹುದು ಎಂದು ಪೊಲೀಸ್ ಉಪಯುಕ್ತ ಜಯಂತ್ ಬಜ್ಜಲೆ ತಿಳಿಸಿದ್ದಾರೆ.

ಬುಧವಾರ ಸಂಜೆ ಕಟ್ಟಡದ ಇತರ ನಿವಾಸಿಗಳು ಮನೋಜ್ ಅವರ ನಿವಾಸದಿಂದ ಕೆಟ್ಟ ವಾಸನೆ ಬರುತ್ತಿರುವುದರಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮನೋಜ್ ಸಹಾನಿಯನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ.

LEAVE A REPLY

Please enter your comment!
Please enter your name here