ಉಳ್ಳಾಲದಲ್ಲಿ ತೀವ್ರಗೊಂಡ ಕಡಲ ಕೊರೆತ-ಸಮುದ್ರರಾಜನ ಹೊಟ್ಟೆ ಸೇರುತ್ತಿರುವ ತೀರದ ಮನೆ, ಮರ, ರಸ್ತೆ

ಮಂಗಳೂರು: ಚಂಡಮಾರುತದಿಂದಾಗಿ ಸಮುದ್ರವು ಬಿರುಸುಗೊಂಡಿದ್ದು ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ.

ಉಳ್ಳಾಲದ ಕೈಕೋ, ಸೀ ಗ್ರೌಂಡ್, ಮೊಗವೀರಪಟ್ಟಣ, ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಸಮುದ್ರದ ಬೃಹತ್ ಅಲೆಗಳು ದಡಕಪ್ಪಳಿಸುತ್ತಿದ್ದು ತೀರದಲ್ಲಿರುವ ಮನೆ, ಮರ, ರಸ್ತೆ ಸಮುದ್ರ ಪಾಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಥಳೀಯ ಶಾಸಕ, ವಿಧಾನಸಭಾ ಸಭಾಪತಿ ಯು.ಟಿ ಖಾದರ್ ಈ ಪ್ರದೇಶಗಳಿಗೆ ಜೂ.11 ರಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದು, ಬಟ್ಟಪ್ಪಾಡಿಯಲ್ಲಿ ಕಡಲ ಕೊರೆತ ತಡೆಗೆ ಮುಂದಿನ ವರ್ಷದಿಂದಲೇ ಶಾಶ್ವತ ಕಾಮಗಾರಿ ಕೈಗೊಳ್ಳುವ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here