ಟೈಲರ್ ಅಂಗಡಿಗೆ ಹೋಗುವುದಾಗಿ ಹೇಳಿ ಹೋದ ವಿವಾಹಿತ ಮಹಿಳೆ ನಾಪತ್ತೆ

ಮಂಗಳೂರು: ಟೈಲರ್ ಅಂಗಡಿಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದ ವಿವಾಹಿತ ಮಹಿಳೆಯೊಬ್ಬರು ಕಳೆದ ಮೇ ತಿಂಗಳಿಂದ ನಾಪತ್ತೆಯಾಗಿದ್ದಾಳೆ ಎಂದು ಮನೆಯವರು ತಡವಾಗಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಿ ಮೂಡ ಗ್ರಾಮದ ಮುಗ್ಗಲಗುಡ್ಡ ನಿವಾಸಿ ವಾಣಿಶ್ರೀ (40) ನಾಪತ್ತೆಯಾದ ಮಹಿಳೆ. ವಾಣಿಶ್ರೀ ಅವರ ವಿವಾಹ ಕಳೆದ ಹತ್ತು ವರ್ಷಗಳ ಹಿಂದೆ ವೇಣೂರಿನ ಯೋಗೇಶ್ ಎಂಬರೊಂದಿಗೆ ನಡೆದಿತ್ತು. ಗಂಡ ಹಾಗೂ ಇಬ್ಬರು ಮಕ್ಕಳ ಜೊತೆ ಬಂಟ್ವಾಳದ ತಾಯಿ ಮನೆಯಲ್ಲಿ ವಾಸವಾಗಿದ್ದರು. ಮೇ.21 ರಂದು ವಾಣಿಶ್ರೀ ಹಳೆಯಂಗಡಿಯ ಪರಿಚಿತ ವ್ಯಕ್ತಿ ವರುಣ್ ಎಂಬಾತನ ಜೊತೆ ಹೋಗಿದ್ದು ಮರುದಿನ ಮನೆಯವರು ಆಕೆಯನ್ನು ಮತ್ತೆ ಮನೆಗೆ ಕರೆದುಕೊಂಡು ಬಂದಿದ್ದರು. ಈ ಘಟನೆ ನಡೆದ ನಾಲ್ಕು ದಿನದ ಬಳಿಕ ಟೈಲರ್ ಅಂಗಡಿಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟ ವಾಣಿಶ್ರೀ ಮತ್ತೆ ಮನೆಗೆ ಬಂದಿಲ್ಲ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಗೆ ತಾಯಿ ಸುನಂದ ದೂರ ನೀಡಿದ್ದಾರೆ. ಟೈಲರ್ ಅಂಗಡಿಗೂ ಹೋಗದ ವಾಣಿಶ್ರೀ ಮತ್ತೆ ಹಳೆಯಂಗಡಿಯ ವರುಣ್ ಜೊತೆಗೆ ಹೋಗಿರಬಹುದು ಎಂದು ತಾಯಿ ಸಂಶಯವನ್ನು ವ್ಯಕ್ತಪಡಿಸಿದ್ದು ಹುಡುಕಿ ಕೊಡುವಂತೆ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here