ಬಸ್ ಹತ್ತಲು ಮಹಿಳೆಯರ ನೂಕುನಗ್ಗಲು ಕಿತ್ತು ಬಂದ ಬಸ್ಸಿನ ಬಾಗಿಲು

ಮಂಗಳೂರು: ಬಸ್ ಹತ್ತಲು ಮಹಿಳೆಯರಲ್ಲಿ ನೂಕುನುಗ್ಗಲು ಉಂಟಾಗಿ ಬಸ್ ಬಾಗಿಲು ಮುರಿದು ಕೈಗೆ ಬಂದ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆಯಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಮಹದೇಶ್ವರ ಬೆಟ್ಟದತ್ತ ಪ್ರಯಾಣ ಹೊರಟಿದ್ದರು. ಈ ವೇಳೆ ಬಸ್ ಹತ್ತಲು ನೂಕುನುಗ್ಗಲ ಉಂಟಾಗಿದ್ದ ಕಾರಣ ನಾ ಮುಂದು ತಾ ಮುಂದು ಎಂದು ಬಸ್ ಹತ್ತುವಾಗ ಬಾಗಿಲು ಮುರಿದು ಮಹಿಳಾ ಮಣಿಗಳ ಕೈಗೆ ಬಂದಿದೆ.

LEAVE A REPLY

Please enter your comment!
Please enter your name here