ಬಾವಿಗಿಳಿದು ಬೆಕ್ಕಿನ ಮರಿಯನ್ನು ರಕ್ಷಿಸಿದ ಪೇಜಾವರ ಶ್ರೀ

ಮಂಗಳೂರು: ಸುಮಾರು 40 ಅಡಿ ಆಳದ ಬಾವಿಗೆ ಬಿದ್ದ ಬೆಕ್ಕಿನ ಮರಿಯೊಂದನ್ನು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಬಾವಿಗಿಳಿದು ರಕ್ಷಿಸಿದ ಘಟನೆ ಮುಚ್ಚಲಕೋಡು ಎಂಬಲ್ಲಿ ನಡೆದಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಮುಚ್ಚಲಕೋಡು ದೇವಸ್ಥಾನಕ್ಕೆ ಆಗಮಿಸಿದ್ದ ಸ್ವಾಮೀಜಿಗೆ ಅಲ್ಲಿನ ಸಿಬ್ಬಂದಿಗಳು ದೇವಸ್ಥಾನದ ಬಾವಿಗೆ ಬೆಕ್ಕಿನ ಮರಿ ಬಿದ್ದಿರುವ ಬಗ್ಗೆ ತಿಳಿಸಿದ್ದಾರೆ. ಕೂಡಲೇ ಕಾರ್ಯಪ್ರವರ್ತರಾದ ಸ್ವಾಮೀಜಿ ಬಾವಿಗೆ ಬಕೆಟ್ ಇಳಿಸಿ, ಬೆಕ್ಕನ್ನು ಮೇಲಕ್ಕೆ ಎತ್ತುವ ಪ್ರಯತ್ನ ಮಾಡಿದಿದ್ದಾರೆ. ಅದು ಸಾಧ್ಯವಾಗದಿದ್ದಾಗ ಸ್ವತಃ ಸ್ವಾಮೀಜಿ ಸುಮಾರು ಐದು ಅಡಿ ವ್ಯಾಸದ ಬಾವಿಗೆ ಹಗ್ಗದ ಸಹಾಯದಿಂದ ಇಳಿದು ಬೆಕ್ಕಿನ ಮರಿಯ ರಕ್ಷಣೆ ಮಾಡಿದ್ದಾರೆ. ಬಕೇಟ್‌ ಮೂಲಕ ಬೆಕ್ಕಿನ ಮರಿಯನ್ನು ಮೇಲಕ್ಕೆ ಕಳುಹಿಸಲು ಪ್ರಯತ್ನಿಸಿದ್ದು ಬೆದರಿದ ಬೆಕ್ಕಿನ ಮರಿ ಬಕೇಟಿಗಿಳಿಯಲು  ನಿರಾಕರಿಸಿದೆ. ಕೊನೆಗೆ ಬೆಕ್ಕಿನ ಮರಿಯನ್ನು ಸ್ವಾಮೀಜಿ ಕೈಯಲ್ಲಿ ಹಿಡಿದುಕೊಂಡೇ ಮೇಲಕ್ಕೆ ತಂದರು.

LEAVE A REPLY

Please enter your comment!
Please enter your name here