ಭೂ ಪರಿವರ್ತನೆ ಇನ್ನೂ ಸರಳ-ಸಚಿವ ಕೃಷ್ಣ ಭೈರೇಗೌಡ

ಮಂಗಳೂರು: ಮಾಸ್ಟರ್ ಪ್ಲಾನ್ ಹೊಂದಿರುವ ನಗರಗಳಲ್ಲಿ ಭೂ ಪರಿವರ್ತನೆಯ ಪ್ರಕ್ರಿಯೆಯನ್ನು ಸರಳಗೊಳಿಸಲು ಕಂದಾಯ ಇಲಾಖೆ ನಿರ್ಧರಿಸಿದೆ. ಈಗ ಇರುವ ಪ್ರಕ್ರಿಯೆಯಲ್ಲಿ ಕಚೇರಿಯಿಂದ ಕಚೇರಿಗೆ ಟೇಬಲ್ ನಿಂದ ಟೇಬಲ್ ಗೆ ಅಲೆಯುವ ಪದ್ಧತಿಯನ್ನು ರದ್ದುಪಡಿಸಿ, ನೇರವಾಗಿ ಅರ್ಜಿದಾರನಿಗೆ ಭೂ ಪರಿವರ್ತನೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಮಧ್ಯವರ್ತಿಗಳ ಪಾಲ್ಗೊಳ್ಳುವಿಕೆ ಕಡಿವಾಣ ಹಾಕುವುದು ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸಬಹುದಾಗಿದೆ ಎಂದು ಕಂದಾಯ ಇಲಾಖೆ ಹೇಳಿದೆ.

ಬಹುತೇಕ ನಗರಗಳಲ್ಲಿ ಅಭಿವೃದ್ಧಿಗಾಗಿ ಹತ್ತಿಪತ್ತು ವರ್ಷಗಳಿಗೆ ಮಾಸ್ಟರ್ ಪ್ಲಾನ್ಸ್ ಸಿದ್ದಪಡಿಸಲಾಗುತ್ತದೆ. ರಸ್ತೆ, ಹೊರ ವರ್ತುಲ ರಸ್ತೆ, ಸೇತುವೆ, ವಸತಿ, ಕೈಗಾರಿಕೆ, ಸಮುಚ್ಚೆಯ ಸೇರಿದಂತೆ ಯಾವ ಪ್ರದೇಶಗಳಿಗೆ ಏನು ಇರಬೇಕು ಎಂಬ ಸ್ಪಷ್ಟ ಮಾಹಿತಿ ಯೋಚನೆ ಈ ಮಾಸ್ಟರ್ ಪ್ಲಾನ್ ನಲ್ಲಿ ಇರುತ್ತದೆ. ಹೀಗಿದ್ದರೂ ವಾಣಿಜ್ಯ ಮತ್ತು ವಸತಿ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡಿಕೊಳ್ಳಲು ಜನರು ಕಚೇರಿಯಿಂದ ಕಚೇರಿಗೆ ಅಲೆಯುತ್ತಾರೆ. ಈ ವ್ಯವಸ್ಥೆ ಬದಲಾಗಬೇಕು. ನಿರ್ಧರಿತ ಸಮಯದಲ್ಲಿ ಜನರಿಗೆ ಭೂ ಪರಿವರ್ತನೆಯ ಆದೇಶ ಸಿಗಬೇಕು. ಇದಕ್ಕಾಗಿ ಭೂ ಪರಿವರ್ತನೆಯ ಪ್ರಕ್ರಿಯೆಯನ್ನು ಸರಳಗೊಳಿಸಲಾಗುತ್ತದೆ. ಜಿಲ್ಲಾಧಿಕಾರಿಗಳಿಗೆ ಈಗ ಇರುವ ಭೂ ಪರಿವರ್ತನೆ ಅಧಿಕಾರವನ್ನು ಮಟಕುಗೊಳಿಸುವ ಚಿಂತನೆಯು ನಡೆದಿದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ ಎಂಬುದು ಕಂದಾಯ ಇಲಾಖೆಯ ಅಭಿಪ್ರಾಯ. ಕಳೆದ ಸರಕಾರದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಏಳು ದಿನಗಳಲ್ಲಿ ಕೃಷಿಭೂಮಿಯನ್ನು ಕೃಷಿಯ ತರ ಉದ್ದೇಶಕ್ಕೆ ಪರಿವರ್ತಿಸಲು ಅವಕಾಶ ನೀಡಲಾಗಿತ್ತು. ಆದರೂ, ಭೂ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಸಾಕಷ್ಟು ತೊಡಕುಗಳು ಉಳಿದುಕೊಂಡಿವೆ. ಈ ಎಲ್ಲಾ ತೊಡಕುಗಳನ್ನು ನಿವಾರಿಸಲಾಗುವುದೆಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here