ಕೈಲಾಸ ದೇಶದ ಪ್ರಧಾನಿಯಾದ ನಟಿ ರಂಜಿತಾ

ಮಂಗಳೂರು: ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತನ್ನ ಆತ್ಮೀಯ ಶಿಷ್ಯ ನಟಿ ರಂಜಿತಾಳನ್ನು ತನ್ನ ದೇಶದ ಪ್ರಧಾನಿಯಾಗಿ ಮಾಡಿರುವುದಾಗಿ ತಮಿಳು ಪತ್ರಿಕೆಗಳು ವರದಿ ಮಾಡಿದೆ.

ಕೈಲಾಸಂ ದೇಶ ಎಂಬ ಹೊಸ ದೇಶವನ್ನೇ ಕಟ್ಟಿರುವ ನಿತ್ಯಾನಂದ ಹಲವು ವರ್ಷಗಳ ಕಾಲ ತನ್ನ ಶಿಷ್ಯರ ಜೊತೆ ಅಲ್ಲಿಯೇ ನೆಲೆಯೂರಿದ್ದಾನೆ. ಇದೀಗ ಈ ದೇಶಕ್ಕೆ ರಂಜಿತಾಳನ್ನು ಪ್ರಧಾನಿ ಮಾಡಿದ್ದಾನೆ.

ಈ ಹಿಂದೆ ತನ್ನ ದೇಶದ ಕರೆನ್ಸಿಯನ್ನು ನಿತ್ಯಾನಂದ ಬಿಡುಗಡೆ ಮಾಡಿದ್ದ ತನ್ನ ದೇಶದ ವೀಸಾ ಕೂಡ ಘೋಷಿಸಿದ್ದ. ದೇಶಕ್ಕೆ ಭೇಟಿ ಕೊಡುವವರು ಯಾವೆಲ್ಲ ನಿಯಮ ಪಾಲಿಸಬೇಕು ಎನ್ನುವ ಕುರಿತದ ವೆಬ್ಸೈಟ್ ಕೂಡ ನಿತ್ಯಾನಂದ ಮಾಡಿಕೊಂಡಿದ್ದಾನೆ. ಮಾತ್ರವಲ್ಲ ಯಾರಿಗೆಲ್ಲ ವೀಸಾ ಕೊಡಲಾಗುತ್ತದೆ ಎನ್ನುವ ವಿಚಾರವೂ ಅದರಲ್ಲಿದೆ. ಕೈಲಾಸಂ ಪಕ್ಕ ಹಿಂದೂಗಳೇ ಇರುವ ದೇಶವೆಂದು ನಿತ್ಯಾನಂದ ಈ ಹಿಂದೆ ಘೋಷಿಸಿಕೊಂಡಿದ್ದ. ಶಿಷ್ಯೆ ರಂಜಿತಾಳ ಹೆಸರನ್ನೇ ಬದಲಾಯಿಸಿ ನಿತ್ಯಾನಂದಮಯಿ ಎಂದು ಹೆಸರಿಟ್ಟಿರುವ ನಿತ್ಯಾನಂದ 2019 ರಲ್ಲಿ ಭಾರತದಿಂದ ಪರಾರಿಯಾಗಿ ಹೊಸ ದೇಶದಲ್ಲಿ ನೆಲೆಸಿದ್ದಾನೆ.

LEAVE A REPLY

Please enter your comment!
Please enter your name here