ನಮ್ಮ ನಾಡ ಒಕ್ಕೂಟ ಮತ್ತು ಶಾಹೀನ್ ಬೀದರ್ ಸಂಸ್ಥೆ ವತಿಯಿಂದ ಅಮ್ಜದ್ ಖಾನ್ ಪೋಳ್ಯ ಅವರಿಗೆ ಸನ್ಮಾನ

ಮಂಗಳೂರು: ನಮ್ಮ ನಾಡ ಒಕ್ಕೂಟ ಮತ್ತು ಶಾಹೀನ್ ಬೀದರ್ ಸಂಸ್ಥೆಯು ಜಂಟಿಯಾಗಿ ಮಂಗಳೂರಿನಲ್ಲಿ ಆಯೋಜಿಸಿದ್ದ ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಮತ್ತು ಕೆರಿಯರ್ ಗೈಡೆನ್ಸ್ ಕಾರ್ಯಕ್ರಮದಲ್ಲಿ ಕಮ್ಯೂನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ಇದರ ಅಧ್ಯಕ್ಷರಾದ ಅಮ್ಜದ್ ಖಾನ್ ಪೋಳ್ಯ ಇವರನ್ನು ಅಭಿನಂದಿಸಿ ಗೌರವಿಸಲಾಯಿತು. ಫೌಂಡೇಶನ್ ನ ಅಧೀನದಲ್ಲಿರುವ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಶೈಕ್ಷಣಿಕ ಯೋಜನೆ ಮತ್ತು ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಯಿತು. ಈ ಮೊದಲು ನಮ್ಮ ನಾಡ ಒಕ್ಕೂಟದ ಮುಖ್ಯಸ್ಥರು ಸೆಂಟರಿಗೆ ಭೇಟಿ ನೀಡಿ ಸೆಂಟರಿನ ಶೈಕ್ಷಣಿಕ ಪದ್ದತಿ, ಫಾರ್ಮೆಟ್ ಮತ್ತು ಯೋಜನೆಯ ಸಮಗ್ರ ಮಾಹಿತಿ ಪಡೆದಿದ್ದರು.

ನಮ್ಮ ನಾಡ ಒಕ್ಕೂಟದ ಮೂಲಕ ಜಿಲ್ಲೆಯಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸುವ ಹಾಗೂ ಅವರು ಗುರಿ ತಲುಪಲು ಬೇಕಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯುತ್ತಿದೆ. ನುರಿತ ಕೆರಿಯರ್ ಗೈಡೆನ್ಸ್ ಎಕ್ಸ್ ಪರ್ಟ್ ಉಮರ್ ಯು.ಎಚ್ ಇನ್ನಿತರರು ವಿದ್ಯಾರ್ಥಿಗಳಿಗೆ ಜಾಗತಿಕ ಅವಕಾಶ, ಕೋರ್ಸ್ ಗಳ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ ಹಾಗೂ ಕೌನ್ಸಿಲಿಂಗ್ ವಿದಾನಗಳ ಬಗ್ಗೆ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here