ಕುದುರೆ ಮುಖ ವನ್ಯಜೀವಿ ವಿಭಾಗ ವ್ಯಾಪ್ತಿಯ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ

ಮಂಗಳೂರು(ಕಾರ್ಕಳ): ಮುಂಗಾರು ಮಳೆ ತೀವ್ರಗೊಂಡಿದ್ದು ಕೊಲ್ಲೂರು, ಸಿದ್ದಾಪುರ, ಅಮಾವಾಸ್ಯೆ ಬೈಲು ಹೆಬ್ರಿ, ಕಾರ್ಕಳ, ಬೆಳ್ತಂಗಡಿ, ಕುದುರೆಮುಖ ಕೆರೆಕಟ್ಟೆ ವ್ಯಾಪ್ತಿಗಳ ಜಲಪಾತಗಳ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಭಂದ ವಿಧಿಸಿ ಕಾರ್ಕಳ, ಕುದುರೆ ಮುಖ ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮುಂದಿನ ಅದೇಶದವರೆಗೆ  ಸಾರ್ವಜನಿಕರಿಗೆ ಜಲಪಾತ ವೀಕ್ಷಣೆಗೆ ಅನುಮತಿ ಇರುವುದಿಲ್ಲ. ಜಲಪಾತಗಳ ಪ್ರವೇಶ ದ್ವಾರದಲ್ಲಿ ಸೂಚನಾ ಫಲಕ ಅಳವಡಿಸಿ ಆ ಪ್ರದೇಶದಲ್ಲಿ ಅಗತ್ಯ ಕಾವಲುಗಾರರನ್ನು ನೇಮಿಸಿ ಪ್ರವೇಶವನ್ನು ನಿರ್ಭಂದಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here