ಉದಯ ನಿಧಿ ಸ್ಟಾಲಿನ್ ತಲೆಗೆ 10 ಕೋಟಿ ಘೋಷಿಸಿದ್ದ ಸ್ವಾಮೀಜಿ ವಿರುದ್ಧ ದೂರು ದಾಖಲು

ಮಂಗಳೂರು(ಬೆಂಗಳೂರು): ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಬ್ರಾಹ್ಮಣ್ಯ ವಾದದ ವಿರುದ್ಧ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ, ನಟ ಉದಯ ನಿಧಿ ಸ್ಟಾಲಿನ್ ತಲೆಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದ ಸ್ವಾಮೀಜಿ ವಿರುದ್ಧ ದೂರು ದಾಖಲಿಸಲಾಗಿದೆ.

ಉದಯನಿಧಿ ಸ್ಟಾಲಿನ್ ತಲೆ ಕತ್ತರಿಸಿ ತಂದವರಿಗೆ 10 ಕೋಟಿ ಕೊಡುತ್ತೇನೆ, ಒಂದು ವೇಳೆ ಯಾರೂ ತಂದುಕೊಡದಿದ್ದರೆ, ತಲೆ ಕತ್ತರಿಸಲು ನಾನೇ ರೆಡಿ ಎಂದು ಸ್ವಾಮೀಜಿ ಮತ್ತು ಕತ್ತಿ ಹಿಡಿದಿದ್ದ ಚಿತ್ರವನ್ನು ಪೋಸ್ಟ್ ಮಾಡಿದ್ದ ಪತ್ರಕರ್ತರನ ಮೇಲೆ ಕೂಡ ಕೇಸ್ ದಾಖಲಾಗಿದೆ. ಬೆದರಿಕೆ ಹಾಗೂ ಜನರಲ್ಲಿ ಭಯಹುಟ್ಟಿಸುವ ಉದ್ದೇಶ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಿಸಲು ಮತ್ತು ಗಲಭೆ ಸೃಷ್ಟಿಗೆ ಈ ಹೇಳಿಕೆ ಕಾರಣವಾಗಿದ್ದು, ಸ್ವಾಮೀಜಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಡಿಎಂಕೆ ಕಾನೂನು ವಿಭಾಗದ ದೇವನೇಶನ್ ದೂರು ದಾಖಲಿಸಿದ್ದು, ಮಧುರೈ ಸೈಬರ್ ಕ್ರೈಂ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here