ಕಾಸಿಗಾಗಿ ಟಿಕೆಟ್‌ ಹಗರಣ – ಚೈತ್ರಾ ಗ್ಯಾಂಗಿನ ವಿಶ್ವನಾಥ್‌ ಜೀ ಪಾತ್ರದಾರಿ ಚನ್ನಾ ನಾಯಕ್‌ ಬಂಧನ

ಮಂಗಳೂರು(ಬೆಂಗಳೂರು): ಬೈಂದೂರು ಕ್ಷೇತ್ರದ ಟಿಕೆಟ್‌ ಕೊಡಿಸುವುದಾಗಿ ವಂಚಿಸಿದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಗ್ಯಾಂಗ್‌ ನ ಚನ್ನಾ ನಾಯಕ್‌ ಎನ್ನುವ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಪೊಲೀಸರ ಬಲೆಗೆ ಬಿದ್ದಿರುವ ಚನ್ನಾ ನಾಯಕ್‌ ಈ ವಂಚನೆಯ ಸಂಚಿನಲ್ಲಿ  ಆರ್ ಎಸ್‌ ಎಸ್ ಪ್ರಚಾರಕ್‌ ವಿಶ್ವನಾಥ್‌ ಜೀ ಪಾತ್ರವನ್ನು ವಹಿಸಿದ್ದ. ಕನ್ನಡ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ್ದ ಚನ್ನಾ ನಾಯಕ್‌ ತಾನು ಪೊಲೀಸರಿಗೆ ಶರಣಾಗುವುದಾಗಿ ಹೇಳಿಕೊಂಡಿದ್ದ. ಚೈತ್ರಾಳೇ ಈ ಸಂಚಿನ ಮುಖ್ಯ ಆರೋಪಿಯಾಗಿದ್ದು ತಮಗೆಲ್ಲ ಆಕೆ ಧಮಕಿ ಹಾಕಿದ್ದಳು ಎಂದೂ ಹೇಳಿದ್ದ. ಈ ಟಿಕೆಟ್‌ ವಂಚನೆ ಪ್ರಕರಣವು ದಿನದಿಂದ ದಿನಕ್ಕೆ ಟ್ವಿಸ್ಟ್‌ ಪಡೆಯುತ್ತಿದ್ದು ಇನ್ನೊಬ್ಬ ಆರೋಪಿ ಹಾಲ ಸ್ವಾಮಿ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

 

LEAVE A REPLY

Please enter your comment!
Please enter your name here