ಸುಳ್ಯ ರಾಮಕೃಷ್ಣ ಕೊಲೆ ಪ್ರಕರಣ-ಇಂದು ಮಂಗಳೂರಿನ 6ನೇ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಲಿರುವ ಆರೋಪಿಗಳು

ಮಂಗಳೂರು: 12 ವರ್ಷಗಳ ಹಿಂದೆ ಸುಳ್ಯದಲ್ಲಿ ನಡೆದಿದ್ದ ರಾಮಕೃಷ್ಣ ರಾವ್ ಕೊಲೆ ಪ್ರಕರಣದ ವಿಚಾರಣೆ ಇಂದು ಮಂಗಳೂರಿನ ಆರನೇ ನ್ಯಾಯಾಲಯದಲ್ಲಿ ನಡೆಯಲಿದೆ.

ಕುರುಂಜಿ ವೆಂಕಟರಮಣ ಗೌಡ ಅವರ ಪುತ್ರ ಡಾ. ರೇಣುಕಾ ಪ್ರಸಾದ್ ಇಂದು ಪುತ್ತೂರು ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಆದರೆ ಪುತ್ತೂರಿನ 5ನೇ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ರಜೆಯಲ್ಲಿರುವ ಕಾರಣ ಪ್ರಭಾರ ಅಧಿಕಾರದಲ್ಲಿರುವ ಮಂಗಳೂರಿನ 6ನೇ ಜಿಲ್ಲಾ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಲಿದೆ.  ಇಂದು ಅಪರಾಹ್ನ ಮಂಗಳೂರಿನ 6ನೇ ನ್ಯಾಯಾಲಯಕ್ಕೆ ಪ್ರಕರಣದ ಆರೋಪಿಗಳು ಹಾಜರಾಗಲಿದ್ದಾರೆ.  ಕೆಲ ದಿನಗಳ ಹಿಂದಷ್ಟೇ, ವಿಚಾರಣೆ ಪೂರ್ಣಗೊಳಿಸಿದ್ದ ಹೈಕೋರ್ಟ್ ಪ್ರಕರಣದಲ್ಲಿ 6 ಮಂದಿಯನ್ನು ದೋಷಿಗಳೆಂದು ಪರಿಗಣಿಸಿ ತೀರ್ಪು ನೀಡಿತ್ತು.

LEAVE A REPLY

Please enter your comment!
Please enter your name here