ಮೈತ್ರಿಕೂಟ ತೊರೆದ ಪವನ್‌ ಕಲ್ಯಾಣ್ ಜನಸೇನಾ ಪಕ್ಷ – ಎನ್‌ ಡಿ ಎ ಗೆ ಎರಡನೇ ಶಾಕ್

ಮಂಗಳೂರು(ಹೈದರಾಬಾದ್‌): ಕೇವಲ ಒಂದು ವಾರದ ಅಂತರದಲ್ಲಿ ಎನ್‌ ಡಿ ಎ ಮೈತ್ರಿಕೂಟಕ್ಕೆ ಎರಡನೇ ಶಾಕ್ ತಗುಲಿದೆ. ವಾರದ ಹಿಂದೆ ಎನ್‌ ಡಿ ಎ ಮೈತ್ರಿಕೂಟವನ್ನು ತಮಿಳುನಾಡಿನ ಅಣ್ಣಾ ಎಐಡಿಎಂಕೆ ಪಕ್ಷ ತೊರೆದಿತ್ತು. ಇದೀಗ ಆಂಧ್ರಪ್ರದೇಶದಲ್ಲಿ ಜನಸೇನಾ ಪಕ್ಷ ಕೂಡ ಬಿಜೆಪಿಗೆ ಶಾಕ್ ನೀಡಿದೆ.‌

ಬದಲಾದ ಕಾಲಘಟ್ಟದಲ್ಲಿ ಜಗನ್ ಸರ್ಕಾರದ ವಿರುದ್ಧ ಸಿಡಿದಿರುವ ನಟ ಪವನ್ ಕಲ್ಯಾಣ್ ತೆಲುಗುದೇಶಂ ಜೊತೆಗೂಡಿ ಚುನಾವಣೆ ಎದುರಿಸಲು ತೀರ್ಮಾನಿಸಿದ್ದಾರೆ. ಕಷ್ಟಕಾಲದಲ್ಲಿ ಬಂಧಿತ ಚಂದ್ರಬಾಬು ನಾಯ್ಡ ಜೊತೆ ಇರಲು ಎನ್‌ ಡಿ ಎ ಮೈತ್ರಿಕೂಟ ತೊರೆದಿದ್ದೇನೆ ಎಂದು ಅಧಿಕೃತವಾಗಿ ಪವನ್ ಕಲ್ಯಾಣ್ ಪ್ರಕಟಿಸಿದ್ದಾರೆ. ಟಿಡಿಪಿ-ಜನಸೇನೆ ಮೈತ್ರಿಯಿಂದ ವೈಎಸ್‌ ಆರ್ ಕಾಂಗ್ರೆಸ್ ಸೋಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ತೆಲಂಗಾಣ ಚುನಾವಣೆ ಬಳಿಕ ತೆಲುಗುದೇಶಂ-ಜನಸೇನಾ ಪಕ್ಷಗಳು ಕಾಂಗ್ರೆಸ್ ಜೊತೆಗೂಡಬಹುದು ಎಂಬ ಸುದ್ದಿಯೂ ಹಬ್ಬಿದೆ.

LEAVE A REPLY

Please enter your comment!
Please enter your name here