ಚಹಾ ಮಾರುತ್ತಿದ್ದ ರಜಿನಿಕಾಂತ್‌ –  ನೋಡಿ ನಿಬ್ಬೆರಗಾದ ಅಭಿಮಾನಿಗಳು

ಮಂಗಳೂರು(ಕೊಚ್ಚಿ): ಕೇರಳದ ಕೊಚ್ಚಿಯಲ್ಲಿರುವ ವೆಂಕಟೇಶ್ವರ ಹೋಟೆಲ್ ಮಾಲಕ ಸುಧಾಕರ್ ಪ್ರಭು ರಾತ್ರಿ ಬೆಳಗಾಗುವುದರೊಳಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿದ್ದಾರೆ. ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಹೋಲುವ ಸುಧಾಕರ್‌ ಹಾವಭಾವಕ್ಕೆ ಅಭಿಮಾನಿಗಳು ಬೆರಗಾಗಿದ್ದಾರೆ.

ಕೇರಳದ ಸ್ಟಾಲ್‌ನಲ್ಲಿ ಚಹಾ ಮಾರುತ್ತಿರುವ ಸುಧಾಕರ್ ರಜಿನಿಕಾಂತ್‌ ಅವರನ್ನು ಹೋಲುತ್ತಿದ್ದು, ಅವರ ವಿಡಿಯೋಗಳನ್ನು ನೆಟ್ಟಿಗರು ವೈರಲ್‌ ಮಾಡಿದ್ದಾರೆ. ಆರಂಭದಲ್ಲಿ ಕೆಲವರು ಸುಧಾಕರ್‌ ಅವರನ್ನು ನಿಜವಾದ ರಜಿನಿಕಾಂತ್‌ ಎಂದೇ ಭಾವಿಸಿದ್ದು, ಚಿತ್ರೀಕರಣಕ್ಕಾಗಿ ಕೊಚ್ಚಿಗೆ ಬಂದಿದ್ದಾರೆ ಎಂದು ಅಂದುಕೊಂಡಿದ್ದರು. ಮಲಯಾಳಂ ಚಿತ್ರ ನಿರ್ದೇಶಕ ನಾದಿರ್ ಶಾ ಅವರು ಸುಧಾಕರ್‌ ಕುರಿತ ವಿಡಿಯೋ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ನಂತರ ಅವರ ವೀಡಿಯೊಗಳು ಹೆಚ್ಚಿನ ಜನರನ್ನು ತಲುಪಿದೆ. ಇದರಿಂದ, ಸುಧಾಕರ್ ಜನಪ್ರಿಯತೆ ಗಳಿಸಿದ್ದು, ಕೇರಳದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸಲಾಗುತ್ತಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here