ಮಂಗಳೂರು(ಜೈಪುರ): ಎರಡು ಕುಟುಂಬಗಳ ನಡುವಿನ ಜಮೀನು ವಿವಾದಕ್ಕೆ ಸಂಬಂಧಿಸಿ ಅ.25ರಂದು ರಾಜಸ್ಥಾನದ ಭರತ್ ಪುರದಲ್ಲಿ ನಡೆದ ಘರ್ಷಣೆಯಲ್ಲಿ, ಓರ್ವ ವ್ಯಕ್ತಿಯನ್ನು ಟ್ರ್ಯಾಕ್ಟರ್ ಮೂಲಕ ಪದೇ ಪದೇ ನೆಲಕ್ಕುರುಳಿಸುವುದನ್ನು ತೋರಿಸುವ ವೀಡಿಯೊ ಒಂದು ವೈರಲ್ ಆಗಿದೆ.
ಬಹದೂರ್ ಸಿಂಗ್ ಗುರ್ಜರ್ ಮತ್ತು ಅತರ್ ಸಿಂಗ್ ಗುರ್ಜರ್ ಕುಟುಂಬಗಳ ನಡುವೆ ಜಮೀನು ವಿಚಾರದಲ್ಲಿ ಮೂರು ದಿನಗಳ ಹಿಂದೆ ಘರ್ಷಣೆಯಾಗಿತ್ತು. ಬುಧವಾರ, ಬಹದೂರ್ ಕುಟುಂಬವು ಟ್ರ್ಯಾಕ್ಟರ್ ನಲ್ಲಿ ವಿವಾದಿತ ಸ್ಥಳಕ್ಕೆ ಬಂದಿತ್ತು. ಎದುರಾಳಿ ಕುಟುಂಬವೂ ಅದೇ ಸಮಯಕ್ಕೆ ಸ್ಥಳಕ್ಕೆ ಬಂದಾಗ ಮತ್ತೆ ಘರ್ಷಣೆಯಾಗಿದ್ದು, ಎರಡೂ ಕುಟುಂಬಗಳ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಅತರ್ ಸಿಂಗ್ ಮಗ ನರ್ಪತ್ ಘರ್ಷಣೆಯ ವೇಳೆ ಕೆಳಗೆ ಬಿದ್ದಾಗ ಟ್ರ್ಯಾಕ್ಟರ್ ಚಾಲಕನು ಅವರ ಮೇಲೆ ನಿರಂತರವಾಗಿ ಟ್ರ್ಯಾಕ್ಟರ್ ಚಲಾಯಿಸಿದ್ದಾನೆ ಎನ್ನಲಾಗಿದೆ. ಟ್ರ್ಯಾಕ್ಟರ್ ಚಾಲಕನು ನರ್ಪತ್ ಸಿಂಗ್ ಗುಜ್ಜರ್ ಎಂಬವರ ಮೇಲೆ ಕನಿಷ್ಠ 8 ಬಾರಿ ಟ್ರ್ಯಾಕ್ಟರ್ ಚಲಾಯಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ನರ್ಪತ್ ಸಿಂಗ್ ಗುಜ್ಜರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆರೋಪಿ ಸೇರಿದಂತೆ ಘಟನೆಗೆ ಸಂಬಂಧಿಸಿದ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘರ್ಷಣೆಯಲ್ಲಿ ಗಾಯಗೊಂಡಿರುವ ಸುಮಾರು ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Warning: Graphic content
In a video reportedly from Rajasthan's Bharatpur, a man involved in a land dispute was killed by running over a tractor #Rajasthan pic.twitter.com/cehVqIxIvT
— Organiser Weekly (@eOrganiser) October 25, 2023