ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಪ್ರವೇಶ-ಎಂದೂ ಕಾಣದ ಆವೇಶ-ಸಹೋದ್ಯೋಗಿಗಳಿಗೆ ಹಲ್ಲೆಗೆ ಮುಂದಾದ ಬಿಹಾರಿ ಬಾಬು

ಮಂಗಳೂರು(ಉಡುಪಿ): ಕಾರ್ಮಿಕನೊಬ್ಬನ ಮೈಮೇಲೆ ಪ್ರೇತಾತ್ಮ ಆವಾಹನೆಯಾಗಿ ಸಹೋದ್ಯೋಗಿಗಳ ಮೇಲೆ ಹಲ್ಲೆ ನಡೆಸಲು ಮುಂದಾದ ಘಟನೆ ಉಡುಪಿಯ ಕಾಪು ತಾಲೂಕಿನ ಉದ್ಯಾವರದ ಪಿತ್ರೋಡಿಯಲ್ಲಿ ನಡೆದಿದೆ.  ಪ್ರೇತಾತ್ಮ ಮೈಮೇಲೆ ಬಂದು ಜತೆಯಲ್ಲಿದ್ದ ಸಹೋದ್ಯೋಗಿಗಳ ಮೇಲೆ ದಾಳಿ ಮುಂದಾಗಿದ್ದು ಎಲ್ಲರೂ  ದಿಕ್ಕಾಪಾಲಾಗಿ ಓಡಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮೀನು ಕಟ್ಟಿಂಗ್ ಶೆಡ್​ನಲ್ಲಿ ಉತ್ತರ ಭಾರತದ 10 ಕ್ಕೂ ಹೆಚ್ಚು ಕಾರ್ಮಿಕರು ಕೆಲಸದಲ್ಲಿದ್ದು ಎಲ್ಲರೂ ಒಂದೇ ರೂಮಿನಲ್ಲಿ ನೆಲೆಸಿದ್ದರು. ತಡರಾತ್ರಿ 11 ರ ಸುಮಾರಿಗೆ ಬಿಹಾರ ಮೂಲದ ಕಾರ್ಮಿಕನ ಮೈಮೇಲೆ ಪ್ರೇತಾತ್ಮದ ಪ್ರವೇಶವಾಗಿದೆ. ಪ್ರೇತಾತ್ಮ ಆವಾಹನೆ ಆಗುತ್ತಲೇ ಸಹೋದ್ಯೋಗಿಗಳ ಮೇಲೆ ದಾಳಿ ನಡೆಸಿದ್ದಾನೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಎಲ್ಲರೂ ಹೊರಗೋಡಿದ್ದು ಕೆಲವರಿಗೆ ಗಾಯಗಳಾಗಿವೆ. ಮಾರಿಕಟ್ಟೆಯ ಬಳಿ ಬಾಯಲ್ಲಿ ಜರ್ದಾ ಹಾಕಿ ಕುರ್ಚಿಯಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದೆವು. ಏಕಾಏಕಿ ನನ್ನ ಸುತ್ತ ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು. ನಾನು ಭಯದಿಂದ ಕೂಗಿ ಕೊಳ್ಳುತ್ತಾ ಓಡಿದೆ. ನನಗೆ ದೆವ್ವ ಹಿಡಿದಂತಾಗಿ ನಾನು ರೂಮಿಗೆ ಓಡಿ ಅಲ್ಲಿ ಕೂಡ ಕೂಗಾಡಿದೆ. ನಾನು ಏನು ಮಾಡುತ್ತಿದ್ದೇನೆ ಎಂದು ನನಗೆ ಅರಿವಿರಲಿಲ್ಲ. ನನ್ನ ಜೊತೆಗಿದ್ದವರು ನನಗೆ ಆಮೇಲೆ ಈ ವಿಚಾರವನ್ನು ತಿಳಿಸಿದರು. ಮಾರಿಕಟ್ಟಿ ಬಳಿಯಿಂದ ಒಬ್ಬ ವ್ಯಕ್ತಿ ತನ್ನ ಹಿಂದೆ ಇದ್ದ ಎನ್ನುವ ಅನುಭವವಾಗುತ್ತಿತ್ತು. ರೂಮಿನೊಳಗೆ ಹೋದಾಗಲೂ ಇದೇ ರೀತಿ ಆಯಿತು ಎಂದು ತನಗಾದ ಅನುಭವವನ್ನು ಪ್ರೇತಾತ್ಮದ ಪ್ರಭಾವಕ್ಕೆ ಒಳಗಾದ ಕಾರ್ಮಿಕ ಹೇಳಿದ್ದಾನೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here