ಪತ್ನಿ, ಪುತ್ರಿಯನ್ನು ಕೊಲ್ಲಲು ವಿಷಪೂರಿತ ಹಾವಿನ ಬಳಕೆ- ವಿಚಾರಣೆ ವೇಳೆ ಪತಿ ಪರಮೇಶ್ವರನ ಕೃತ್ಯ ಬೆಳಕಿಗೆ – ಪತಿ ಗಣೇಶ್‌ ಜೈಲಿಗೆ

ಮಂಗಳೂರು (ಒಡಿಶಾ): ಮಲಗುವ ಕೋಣೆಯೊಳಗೆ ವಿಷಪೂರಿತ ಹಾವನ್ನು ಬಿಟ್ಟು ಪತ್ನಿ ಹಾಗೂ ಪುತ್ರಿಯನ್ನು ಕೊಂದ ಆರೋಪದಲ್ಲಿ 25 ವರ್ಷ ಪ್ರಾಯದ ಗಣೇಶ್ ಪಾತ್ರ ಎಂಬ ವ್ಯಕ್ತಿಯನ್ನು ಒಡಿಶಾ ಗಂಜಂ ಜಿಲ್ಲೆಯ ಅಧೇಯಿಗಾಂವ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬೆಹ್ರಾಂಪುರದಿಂದ 60 ಕಿಲೋ ಮೀಟರ್ ದೂರದ ಕಬಿಸೂರ್ಯಾ ನಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಅಧೇಯಿಗಾಂವ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

2020ರಲ್ಲಿ ವಿವಾಹವಾಗಿದ್ದ  ಗಣೇಶ್‌ ಪಾತ್ರ ಗೆ ಎರಡು ವರ್ಷದ ದೇಬಸ್ಮಿತ ಎಂಬ ಹೆಸರಿನ  ಮಗಳಿದ್ದಾಳೆ. ಆದರೆ ಪತ್ನಿ ಬಸಂತಿ ಪಾತ್ರಾ (23) ಜೊತೆ ಮನಸ್ತಾಪವಿದ್ದು ಹಾವಾಡಿಗರೊಬ್ಬರಿಂದ ಧಾರ್ಮಿಕ ಕಾರ್ಯಕ್ಕಾಗಿ ಎಂದು ಸುಳ್ಳು ಹೇಳಿ ಹಾವು ಖರೀದಿಸಿದ್ದ.

ಪತ್ನಿ ಹಾಗೂ ಪುತ್ರಿ ಮಲಗಿದ್ದ ಕೋಣೆಗೆ ಹಾವನ್ನು ಬಿಟ್ಟು ತಾನು ಬೇರೊಂದು ಕೋಣೆಯಲ್ಲಿ ಮಲಗಿದ್ದ.  ಮರು ದಿನ ಬೆಳಿಗ್ಗೆ ಹಾವು ಕಡಿತದಿಂದ ಇಬ್ಬರೂ ಮೃತಪಟ್ಟಿರುವುದು ಕಂಡು ಬಂದಿದೆ.

ಘಟನೆಗೆ ಸಂಬಂಧ ಪಟ್ಟಂತೆ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಮಾವ ತನ್ನ ಪುತ್ರಿ ಹಾಗೂ ಮೊಮ್ಮಗಳನ್ನು ತನ್ನ ಅಳಿಯ ಹತ್ಯೆ ಮಾಡಿದ್ದಾನೆ ಎಂದು ದೂರು ನೀಡಿದ್ದಾರೆ. ಗಣೇಶ್‌ ನನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ತಿಳಿದು ಬಂದಿದೆ ಎಂದು ಗಂಜಂ ಪೊಲೀಸ್ ವರಿಷ್ಠಾಧಿಕಾರಿ ಜಗಮೋಹನ್ ಮೀನಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here