ಟಾರ್ಗೆಟ್ ಇಲ್ಯಾಸ್ ಹತ್ಯೆ ಪ್ರಕರಣ-5 ಆರೋಪಿಗಳು ನಿರ್ದೋಷಿ-ಮಂಗಳೂರು 3ನೇ ಜಿಲ್ಲಾ ಸತ್ರ  ನ್ಯಾಯಾಲಯ ತೀರ್ಪು

ಮಂಗಳೂರು: ಕುಖ್ಯಾತ ಟಾರ್ಗೆಟ್‌ ಗ್ಯಾಂಗ್‌ನ ನಾಯಕ ಟಾರ್ಗೆಟ್‌ ಇಲಿಯಾಸ್‌ ಹತ್ಯೆ ಪ್ರಕರಣದ ತೀರ್ಪು ಹೊರಬಿದ್ದಿದ್ದು 5 ಆರೋಪಿಗಳನ್ನು ನಿರ್ದೋಷಿಗಳೆಂದು ಮಂಗಳೂರು ಮೂರನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸಂಧ್ಯಾ ತೀರ್ಪು ನೀಡಿದ್ದಾರೆ. 2018 ಜ.18 ರಂದು ಮನೆಯಲ್ಲಿ ಇಲಿಯಾಸ್‌ ಹತ್ಯೆಯಾಗಿದ್ದರು. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಯು.ಟಿ ಖಾದರ್‌ ಅವರ ಅಪ್ತರಾಗಿದ್ದ ಮೊಹಮ್ಮದ್‌ ಇಲಿಯಾಸ್‌ ಮಂಗಳೂರು ಯೂತ್‌ ಕಾಂಗ್ರೇಸ್‌ನ ವಿಧಾನಸಭಾಕ್ಷೇತ್ರದ ಉಪಾಧ್ಯಕ್ಷರಾಗಿದ್ದರು. ಇಲ್ಯಾಸ್‌ ಮನೆಗೆ ನುಗ್ಗಿ ದಾವೂದ್‌ ಮೊಹಮ್ಮದ್‌ ಮತ್ತು ಶಮೀರ್‌ ಎಂಬವರು ಕೊಲೆ ಮಾಡಿರುವುದಾಗಿಯೂ ಇದನ್ನು ಇಲ್ಯಾಸ್‌ನ ಅತ್ತೆ ಅಸ್ಮತ್‌, ಕಣ್ಣಾರೆ ನೋಡಿರುವುದಾಗಿ ಸಾಕ್ಷಿ ನೀಡಿದ್ದರು. ಆರೋಪಿಗಳ ಪರ ಹಾಜರಾದ ಕ್ರಿಮಿನಲ್‌ ನ್ಯಾಯವಾದಿ ಜಿನೇಂದ್ರೆ ಕುಮಾರ್‌, ದಾವೂದ್‌ ಮತ್ತು ಶಮೀರ್‌ನನ್ನು ಸುಳ್ಳಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹಾಗಾಗಿಯೇ ಆಸ್ಪತ್ರೆಯಲ್ಲಿ ದಾಖಲು ಮಾಡುವಾಗ ಕೊಂದವರು ಯಾರೆಂದು ತಿಳಿದಿಲ್ಲ ಎಂದು ದಾಖಲಿಸಿದ್ದರು ಎಂದು ವಾದ ಮಂಡಿಸಿದ್ದರು. ಪೊಲೀಸ್‌ ಇಲಾಖೆಯಲ್ಲಿ ಕೂತೂಹಲ ಮೂಡಿಸಿದ ಈ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಆರೋಪಿಗಳನ್ನು ನಿರ್ದೋಷಿಗಳು ಎಂದು ಮಂಗಳೂರು ಮೂರನೇ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾದೀಶೆ ಸಂಧ್ಯಾ ತೀರ್ಪು ನೀಡಿದ್ದಾರೆ.

LEAVE A REPLY

Please enter your comment!
Please enter your name here