ಸುಳ್ಯ ಮಂಡಲ ಬಿಜೆಪಿ ಕೋರ್‌ ಕಮಿಟಿಯಲ್ಲಿ ಸಮನ್ವಯದ ಕೊರತೆ- ಮಾಜಿ ಶಾಸಕರ ಕಡೆಗಣನೆ-ಭುಗಿಲೆದ್ದ ಅಸಮಾಧಾನ- ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ರಾಜೀನಾಮೆ

ಮಂಗಳೂರು: ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಪ್ರಾಥಮಿಕ ಸದಸ್ಯತ್ವ ಮತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಯ ಮಂಡಲ ಬಿ‌ಜೆಪಿ ಮತ್ತು ಕೋರ್ ಕಮಿಟಿ ಪದಾಧಿಕಾರಿಗಳ ವರ್ತನೆಯಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. ಕಳೆದ ಸುಮಾರು ಒಂದು ವರ್ಷದಿಂದ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಗುತ್ತಿದೆ. ನಾನು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷನಾಗಿದ್ದು, ನನ್ನ ಗ್ರಾಮದಲ್ಲೇ ಪಕ್ಷದ ಸಭೆಗಳು ನಡೆಯುವಾಗ ನನಗೆ ಆಮಂತ್ರಣ ನೀಡುತ್ತಿಲ್ಲ. ಸಭೆ ಆರಂಭವಾದ ಬಳಿಕ ನೆಪ ಮಾತ್ರಕ್ಕೆ ಫೋನ್ ಮಾಡಲಾಗುತ್ತದೆ. ಇದರಿಂದ ಬೇಸರಗೊಂಡು ನಾನು ಸಭೆಗೆ ಹೋಗದಿದ್ದಾಗ ಬೊಳ್ಳೂರು ಪಕ್ಷ ತೊರೆದರೆ, ಪಕ್ಷಕ್ಕೇನು ನಷ್ಟವಿಲ್ಲ ಎಂದು ಹೇಳಿಕೊಂಡು ತಿರುಗುವ ಪ್ರಕರಣಗಳು ನಡೆದಿವೆ. ಈ ಹಿನ್ನಲೆಯಲ್ಲಿ ನಾನು ಬಿಜೆಪಿಗೆ ರಾಜೀನಾಮೆ ನೀಡಲಿದ್ದೇನೆ ಎಂದು ಅವರು ಹೇಳಿದ್ದಾರೆ. ನನ್ನ ಜೊತೆಗೆ ಇನ್ನೂ ಹಲವರು ರಾಜೀನಾಮೆ ನೀಡಲಿದ್ದು, ಮಾಜಿ ಸಚಿವ ಎಸ್.ಅಂಗಾರರನ್ನು ಕೂಡ ಕೋರ್ ಕಮಿಟಿಗೆ ಕೂಡ ಸೇರಿಸದೆ ಕಡೆಗಣಿಸುವ ಪ್ರಯತ್ನ ನಡೆಯುತ್ತಿದೆ ಎಂದು ಬೊಳ್ಳೂರು ಹೇಳಿದರು.

LEAVE A REPLY

Please enter your comment!
Please enter your name here