ಮಾದಕ ವಸ್ತು ಎಂಡಿಎಂಎ ಸಮೇತ ಮೂರು ಮಂದಿ ಆರೋಪಿಗಳ ಬಂಧನ

ಮಂಗಳೂರು(ಬಜಪೆ): ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ, ಶಾಂತಿಗುಡ್ಡೆ ಚೆಕ್ ಪಾಯಿಂಟ್ ಬಳಿ ಮಾದಕ ವಸ್ತು ಎಂಡಿಎಂಎ ಯನ್ನುಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂರು ಮಂದಿಯನ್ನು ಬಜಪೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಕುಳಾಯಿ ವೆಂಕಟ್ರಮಣ ಶಾಲೆಯ ಬಳಿ ನಿವಾಸಿ ಅಣ್ಣಪ್ಪಸ್ವಾಮಿ ಯಾನೆ ಮನು, ಮಂಜೇಶ್ವರ ಉದ್ಯಾವರ ಶಾಲೆಯ ಬಳಿ ಮೊಹಮ್ಮದ್ ಜುನೈದ್ ಯಾನೆ ಜುನ್ನಿ, ಕುಳಾಯಿ ಹೊಸಬೆಟ್ಟಿನ ಎಂ.ಕೆ ಆಕಾಶ ಯಾನೆ ಮಾದವ ಕೌಶಲ್ಯ ಆಕಾಶ ಪಡ್ಡಾಯಿ ಎಂದು ಗುರುತಿಸಲಾಗಿದೆ. ಬಂಧಿತರಿಂದ 30 ಸಾವಿರ ಮೌಲ್ಯದ  6.27 ಗ್ರಾಂ ಎಂಡಿಎಂಎ, 40 ಸಾವಿರ ರೂಪಾಯಿ ಮೌಲ್ಯದ ಬೈಕನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

 

LEAVE A REPLY

Please enter your comment!
Please enter your name here