ವಿಟ್ಲ ಹೊರವಲಯದ ಅಡ್ಯನಡ್ಕದಲ್ಲೊಂದು ಹೈಡ್ರಾಮ-ಪ್ರೀತಿಸಿ ಉಂಡುಹೋದ…ಕೊಂಡೂಹೋದ ಯುವಕನ ಮನೆ ಮುಂದೆ ಪಂಜಾಬಿ ಕುಡಿ ಪ್ರತಿಭಟನೆ

ಮಂಗಳೂರು(ಅಡ್ಯನಡ್ಕ): ಪ್ರೀತಿಸುವ ನಾಟಕವಾಡಿ ಕೈಕೊಟ್ಟಿರುವ ಯುವಕನ ಮನೆ ಮುಂದೆ ಯುವತಿಯೊಬ್ಬಳು. ಮೊಕ್ಕಾಂ ಹೂಡಿ ನಿರಶನ ನಡೆಸಿದ ವಿಚಿತ್ರ ಹಾಗೂ ಅಪರೂಪದ ಘಟನೆ ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ಫೆ 6ರಂದು ಸಂಜೆ ನಡೆದಿದೆ. ಯುವತಿಯನ್ನು ಮನವೊಲಿಸಲು ವಿಫಲರಾದ ಪೊಲೀಸರು ರಾತ್ರಿ ವೇಳೆ ಆಕೆಯನ್ನು ಠಾಣೆಗೆ ಕರೆದೊಯಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತರ ಭಾರತದ ಪಂಜಾಬ್ ಮೂಲದ ಯುವತಿ ಬೆಂಗಳೂರಿನಲ್ಲಿ ಸಂಸ್ಥೆಯೂಂದನ್ನು ನಡೆಸುತ್ತಿದ್ದು, ಅಲ್ಲಿ ಆಕೆಗೆ ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಅಡ್ಯನಡ್ಕದ ಯುವಕನೊಬ್ಬನ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ ಮುಂದಿನ ದಿನಗಳಲ್ಲಿ ಅವರಿಬ್ಬರ ಮಧ್ಯೆ ಹಣಕಾಸಿನ ವಹಿವಾಟು ನಡೆದಿದೆ ಎನ್ನಲಾಗಿದೆ. ಫೆ.6ರ ಸಂಜೆ ಅಡ್ಯನಡ್ಕದ ಯುವಕನ ಮನೆ ಬಳಿ ಬಂದ ಸಂತ್ರಸ್ತ ಯುವತಿ ಪ್ರೀತಿಯ ನಾಟಕವಾಡಿ ಯುವಕ ಹಣ ಪಡೆದಿದ್ದಾನೆ. ಈಗ ಹಣವು ವಾಪಸ್ಸು ನೀಡದೆ, ವಿವಾಹವು ಆಗದೇ ವಂಚಿಸಿದ್ದಾನೆ ಎಂದು ಆರೋಪಿಸಿ ಯುವಕನ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾಳೆ. ಈ ವೇಳೆ ಯುವಕ ಮನೆಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ. ಯುವಕ ಹಾಗೂ ಯುವತಿ ಭಿನ್ನ ಕೋಮಿಗೆ ಸೇರಿದವರೆಂದು ಮಾಹಿತಿ ಹಬ್ಬುತ್ತಿದ್ದಂತೆ ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸರು ಯುವತಿಯನ್ನು ವಿಟ್ಲ ಠಾಣೆಗೆ ಕರೆದೊಯ್ದು ಸಮಾಧಾನ ಪಡಿಸಿದ್ದಾರೆ. ಆದರೆ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

LEAVE A REPLY

Please enter your comment!
Please enter your name here