ಬರ್ತ್​ಡೇ ಗೆ ಎಣ್ಣೆ ಪಾರ್ಟಿ – ಎಣ್ಣೆ ಕಡಿಮೆಯಾದಾಗ ನಂದಿ ಹೋದ ಸ್ನೇಹಿತನ ಜೀವ

ಮಂಗಳೂರು(ಕಲ್ಯಾಣ್): ಹುಟ್ಟುಹಬ್ಬದಂದು ಎಣ್ಣೆ ಕಮ್ಮಿಯಾಯಿತೆಂದು ಸ್ನೇಹಿತನನ್ನು 4ನೇ ಮಹಡಿಯಿಂದ ಎಸೆದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಕಲ್ಯಾಣ್​ನ ಚಿಂಚಪಾದ ಗಾಂವ್​ನಲ್ಲಿ ಈ ದುರ್ಘಟನೆ ಜೂ.27ರಂದು ನಡೆದಿದ್ದು ಕಾರ್ತಿಕ್​ ಎಂಬಾತ ಸಾವನ್ನಪ್ಪಿದ್ದಾನೆ.
ಕಾರ್ತಿಕ್ ತನ್ನ​​ 25ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ.  ಹೀಗಾಗಿ ಸ್ನೇಹಿತರಾದ ನಿಲೇಶ್​​ ಕ್ಷೀರಸಾಗರ್​, ಸಾಗರ್​​ ಕಾಳೆ ಮತ್ತು ಧೀರಜ್​ ಜೊತೆಗೆ ಎಣ್ಣೆ ಪಾರ್ಟಿ ಮಾಡುದ್ದಾನೆ. ಆದರೆ ಎಣ್ಣೆ ಖಾಲಿಯಾದಾಗ ಕೋಪಗೊಂಡ ಸ್ನೇಹಿತರು ಆತನನ್ನು 4ನೇ ಮಹಡಿಯಿಂದ ಎತ್ತಿ ಕೆಳಗೆ ಬಿಸಾಕಿದ್ದಾರೆ.

ತಡರಾತ್ರಿ ಎಣ್ಣೆ ಖಾಲಿಯಾದಾಗ ಸ್ನೇಹಿತರ ಮತ್ತು ಕಾರ್ತಿಕ್​ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಕಾರ್ತಿಕ್​ ಅವಮಾನಗೊಂಡು ಕೋಪದಲ್ಲಿ ನಿಲೇಶ್​ ತಲೆಯ ಮೇಲೆ ಮದ್ಯದ ಬಾಟಲಿಯಿಂದ ಹೊಡೆದಿದ್ದಾನೆ. ಪರಿಣಾಮ ಗಲಾಟೆ ಮತ್ತಷ್ಟು ತಾರಕಕ್ಕೇರಿದ್ದು, ಮೂವರು ಸ್ನೇಹಿತರನ್ನು ಕಾರ್ತಿಕ್​ ಮನೆಯಿಂದ ಹೊರ ನಡೆಯುವಂತೆ ಹೇಳಿದ್ದಾನೆ.

ಅವಮಾನವಾಗಿದೆ ಅಂದು ಕೊಂಡು ಎಣ್ಣೆಯ ಗುಂಗಿನಲ್ಲಿದ್ದ ಸ್ನೇಹಿತರು ಕೋಪದಿಂದ ಕಾರ್ತಿಕ್​ ನನ್ನು 4ನೇ ಮಹಡಿಯಿಂದ ಕೆಳಗೆ ಎಸೆದಿದ್ದಾರೆ. ಕೆಳಗೆ ಬಿದ್ದ ಕಾರ್ತಿಕ್​ ಸಾವನ್ನಪ್ಪಿದ್ದಾನೆ.

ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಮೂವರು ಸ್ನೇಹಿತರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಟಲಿ ಏಟಿಗೆ ಗಾಯಗೊಂಡ  ಸ್ನೇಹಿತ ನಿಲೇಶ್ ನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬದುಕಿನ ಸರಿ ತಪ್ಪುಗಳನ್ನು ಹೇಳುವ ಮೂಲಕ ಕನ್ನಡಿಯಂತಿರಬೇಕಾಗಿದ್ದ ಸ್ನೇಹಿತರು ಎಣ್ಣೆಗಾಗಿ ಸ್ನೇಹಿತನನ್ನೇ ಕೊಂದಿರುವುದು ವಿಪರ್ಯಾಸವೇ ಸರಿ.

LEAVE A REPLY

Please enter your comment!
Please enter your name here