ಲೋಕಸಭಾ ಸಚೇತಕರಾಗಿ ಕೋಟ ಶ್ರೀನಿವಾಸ ಪೂಜಾರಿ ಆಯ್ಕೆ

ಮಂಗಳೂರು(ದೆಹಲಿ): ಚಿಕ್ಕಮಗಳೂರು,ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಲೋಕಸಭೆಯ ಸಚೇತಕರಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ಬಿಜೆಪಿಯ ಪಾರ್ಲಿಮೆಂಟರಿ ಕಛೇರಿ ಕಾರ್ಯದರ್ಶಿ ಡಾ.ಶಿವಶಕ್ತಿನಾಥ್‌ ಭಕ್ಷಿ ಅವರು, ಡಾ.ಸಂಜಯ್‌ ಜೈ ಸ್ವಾಲ್‌ ಅವರನ್ನು ಲೋಕಸಭೆಯ ಮುಖ್ಯ ಸಚೇತಕರಾಗಿ ನೇಮಕ ಮಾಡಿದ್ದಾರೆ. ಇನ್ನುಳಿದಂತೆ 16 ಜನರನ್ನು ಸಚೇತಕರನ್ನಾಗಿ ನೇಮಿಸಲಾಗಿದೆ. ಈ 16 ಜನ ಸಚೇತಕರ ಪೈಕಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಸ್ಥಾನ ಲಭಿಸಿದೆ.

LEAVE A REPLY

Please enter your comment!
Please enter your name here