ಪೆಟ್ರೋಲ್ ಬಾಂಬ್ ಎಸೆದು ಬಿಜೆಪಿ ನಾಯಕನ ಹತ್ಯೆ

ಮಂಗಳೂರು: ಪುದುಚೇರಿಯಲ್ಲಿ ಪೆಟ್ರೋಲ್ ಬಾಂಬ್ ಎಸೆದು ಬಿಜೆಪಿ ನಾಯಕನೋರ್ವನನ್ನು ಹತ್ಯೆ ಮಾಡಲಾಗಿದೆ. ಹತ್ಯೆಯಾದ ವ್ಯಕ್ತಿಯನ್ನು ಸೆಂಥಿಲ್ ಕುಮಾರ್ ಎಂದು ಗುರುತಿಸಲಾಗಿದ್ದು ಈತ ಪುದುಚೇರಿಯ ಗೃಹ ಸಚಿವ ಎ ನಮಶಿವಾಯ ಎಂಬವರ ಸೋದರ ಸಂಬಂಧಿಯಾಗಿದ್ದು ಕಳೆದ ಮಾ.26ರ ರಾತ್ರಿ 7 ಮಂದಿಯ ತಂಡ ಈ ಕೃತ್ಯ ಎಸಗಿದೆ.

ರಸ್ತೆ ಬದಿ ಬೇಕರಿಯೊಂದರ ಬಳಿ ನಿಂತಿದ್ದ ಸೆಂಥಿಲ್ ಮೇಲೆ ಬೈಕುಗಳಲ್ಲಿ ಬಂದ 7 ಮಂದಿ ತಂಡ ಪೆಟ್ರೋಲ್ ಬಾಂಬ್ ಎಸೆದು, ಹಲ್ಲೆ ನಡೆಸಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಎರಡು ಬಾರಿ ಪೆಟ್ರೋಲ್ ಬಾಂಬ್ ಎಸೆದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಗೃಹ ಸಚಿವ ನಮಶಿವಾಯ, ಸೆಂಥಿಲ್ ಮೃತ ದೇಹ ನೋಡಿ ಕುಸಿದು ಬಿದ್ದು ಅಸ್ವಸ್ಥರಾಗಿದ್ದರು. ಹತ್ಯೆ ನಡೆಸಿ ಪರಾರಿಯಾಗಿದ್ದ ಆರೋಪಿ ಬಳಿಕ ಪೊಲೀಸರಿಗೆ ಶರಣಾಗಿದ್ದು ತನಿಖೆ ಮುಂದುವರಿದಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here