ಬೈಕ್ ಟ್ಯಾಂಕರ್ ಡಿಕ್ಕಿ – ಯುವಕರಿಬ್ಬರ ದುರ್ಮರಣ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಚೆರ್ವತ್ತೂರಿನ ಕೊವಲ್ ನಲ್ಲಿ ನಡೆದ ಟ್ಯಾಂಕರ್ ಮತ್ತು ಬೈಕ್ ಅಪಘಾತದಲ್ಲಿ ಯುವಕರಿಬ್ಬರು ಮೃತ ಪಟ್ಟ ಘಟನೆ ಮಾರ್ಚ್ 30 ರ ರಾತ್ರಿ ನಡೆದಿದೆ.

ನಿಲೇಶ್ವರ ಚಾಯೋತ್ ನ ದೀಪಕ್(33) ಮತ್ತು ಕಣ್ಣಾಟಿಪಾರೆಯ ಶೋಭಿತ್ (27) ಮೃತ ಯುವಕರು. ದೀಪಕ್ ಖಾಸಗಿ ಬಸ್ ನಲ್ಲಿ ಚಾಲಕರಾಗಿದ್ದು, ಶೋಭಿತ್ ಹಣಕಾಸು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಸ್ನೇಹಿತರಾಗಿದ್ದ ಇವರು ರಾತ್ರಿ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

LEAVE A REPLY

Please enter your comment!
Please enter your name here