ರಾಮನ ತೊಡೆಯೇರಿದ ಶಾಸಕ- ರಾಮಭಕ್ತರ ಆಕ್ರೋಶ

ಮಂಗಳೂರು: ರಾಮನವಮಿ ಆಚರಣೆ ವೇಳೆ ಬಸವ ಕಲ್ಯಾಣದ ಬಿಜೆಪಿ ಶಾಸಕ ಶರಣು ಸಲಗಾರ ಶ್ರೀ ರಾಮನಿಗೆ ಅವಮಾನ ಮಾಡಿದ್ದಾರೆಂಬ ಅಪಾದನೆ ಕೇಳಿಬಂದಿದ್ದು, ರಾಮನ ವಿಗ್ರಹದ ಕಾಲ ಮೇಲೆ ನಿಂತು ಕೊರಳಿಗೆ ಹೂಹಾರ ಹಾಕುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಮನವಮಿ ಶೋಭಾಯಾತ್ರೆ ವೇಳೆ ರಾಮನ ಮೂರ್ತಿಯ ಕಾಲ ಮೇಲೆ ನಿಂತು ಹೂವಿನ ಹಾರ ಹಾಕುವುದರ ಜತೆಗೆ ಅಲ್ಲಿಯೇ ನಿಂತು ಬೇರೆ ಬೇರೆ ಪೋಸ್ ನೀಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಎಲ್ಲಾ ಫೋಟೋಗಳು ವೈರಲ್ ಆಗಿದೆ. ಪ್ರಚಾರದ ನಡುವೆ ಎಡವಟ್ಟು ಮಾಡಿಕೊಂಡಿರುವ ಶಾಸಕರ ವಿರುದ್ಧ ರಾಮಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬ ಫೇಸ್ಬುಕ್ ನಲ್ಲಿ ಫೋಟೋ ಹಂಚಿಕೊಂಡಿದ್ದು, ಇದು ಹಿಂದೂ ಸಂಸ್ಕೃತಿಯ ಎಂದು ಪ್ರಶ್ನಿಸಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here