ಇಂದು ಕಮಲ ದಳ ಸೇರಲಿರುವ ಕಿಚ್ಚಸುದೀಪ್‌, ದರ್ಶನ್ ತೂಗುದೀಪ್

ಮಂಗಳೂರು: ಕನ್ನಡದ ಖ್ಯಾತ ನಟ ಸುದೀಪ್‌ ಮತ್ತು ದರ್ಶನ್ ಇಂದು ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ.

ಇಂದು ಎ.5ರ ಮಧ್ಯಾಹ್ನ 1:30ಕ್ಕೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಸುದೀಪ್‌ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಇದಾದ ಬಳಿಕ 2:30ಕ್ಕೆ ಇನ್ನೋರ್ವ ಚಿತ್ರನಟ ದರ್ಶನ್‌ ತೂಗುದೀಪ ಕಮಲ ಪಕ್ಷ ಸೇರಲಿದ್ದಾರೆ. ಕಿಚ್ಚ ಸುದೀಪ್‌ ಸೇರ್ಪಡೆಯಿಂದ ಎಸ್‌ ಟಿ ಮತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಲಾಭ ಆಗಬಹುದೆಂಬ ಲೆಕ್ಕಾಚಾರದಲ್ಲಿ ಸುದೀಪ್‌ ಗೆ ಬಿಜೆಪಿ ಗಾಳ ಹಾಕಿದ್ದರೆ, ಒಕ್ಕಲಿಗರ ಪ್ರಾಬಲ್ಯವಿರುವ ಮೈಸೂರು ಭಾಗದಲ್ಲಿ ದರ್ಶನ್‌ ಸೇರ್ಪಡೆ ಪಕ್ಷಕ್ಕೆ ಶಕ್ತಿ ತುಂಬಬಹುದೆಂಬ ಲೆಕ್ಕಾಚಾರ ಬಿಜೆಪಿಯದ್ದು. ದರ್ಶನ್‌ ಆಪ್ತ ಕೆಲ ಸಮಯದ ಹಿಂದೆ ಬಿಜೆಪಿ ಸೇರಿದ್ದಾರೆ. 

https://www.ndtv.com/video/news/news/ahead-of-karnataka-polls-kannada-star-kiccha-sudeep-to-join-bjp-today-692062

LEAVE A REPLY

Please enter your comment!
Please enter your name here